ವಕ್ಫ್ ಮಂಡಳಿ ಮತ್ತು ಉತ್ತರ ಪ್ರದೇಶ ಸರ್ಕಾರದ ನಡುವೆ 1992ರಲ್ಲಿ ಒಪ್ಪಂದ ನಡೆದು, ಜ್ಞಾನವಾಪಿ ಮಸೀದಿಯ ಒಂದು ಭಾಗವನ್ನು ಪೊಲೀಸ್ ಠಾಣೆಯನ್ನಾಗಿ ಮಾರ್ಪಾಡು ಮಾಡಲಾಗಿದೆ. ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣ ವೇಳೆ ಮಸೀದಿಗೆ ಸೇರಿದ ಭೂಮಿಯ ಕೆಲಭಾಗವನ್ನು ಸರ್ಕಾರ ಒತ್ತುವರಿ ಮಾಡಿಕೊಂಡಿತ್ತು ಮತ್ತು ಅದರ ಬದಲಾಗಿ ಬೇರೆಡೆ ಭೂಮಿಯನ್ನು ನೀಡಿದೆ. ಜ್ಞಾನವಾಪಿ ಮಸೀದಿ ವಕ್ಫ್ ಮಂಡಳಿಗೆ ಸೇರಿದ ಆಸ್ತಿ ಎಂಬುದು ಇದರಿಂದ ಸಾಬೀತಾಗುತ್ತದೆ ಎಂದು ಶಮೀಮ್ ವಾದ ಮಂಡಿಸಿದರು ಎಂದು ಯಾದವ್ ತಿಳಿಸಿದ್ದಾರೆ.