‘ಹಿಂದೂ ಸನಾತನ ಧರ್ಮವು ಜಗತ್ತಿನಲ್ಲೇ ಅತ್ಯಂತ ಹಳೆಯ ಧಾರ್ಮಿಕ ನಂಬಿಕೆಯಾಗಿದೆ. ಅದು ಜನರನ್ನು ಸರಿಯಾದ ಜೀವನಕ್ರಮದ ಕಡೆಗೆ ಕೊಂಡೊಯ್ಯುತ್ತದೆ. ಹಿಂದೂ ಸನಾತನ ಧರ್ಮವನ್ನು ರಕ್ಷಿಸುವ ಮತ್ತು ಪ್ರಚುರ ಪಡಿಸುವ ನಮ್ಮ ಪ್ರಮುಖ ಉದ್ದೇಶದ ಭಾಗವಾಗಿ, ಹಿಂದೂ ಜೀವನ ಕ್ರಮ ಅಳವಡಿಸಿಕೊಳ್ಳಲು ಬಯಸುವ ಅನ್ಯಧರ್ಮೀಯರಿಗೆ ಸಂಪ್ರದಾಯಗಳು ಮತ್ತು ಧಾರ್ಮಿಕ ವಿಷಯಗಳ ಕುರಿತು ತರಬೇತಿ ನೀಡುತ್ತೇವೆ’ ಎಂದು ಟಿಟಿಡಿ ಮುಖ್ಯಸ್ಥ ಭೂಮನ ಕರುಣಾಕರ ರೆಡ್ಡಿ ಹೇಳಿದರು.