ಆದರೆ, ಈ ಹಿಂದೆ ಯುಡಿಎಫ್ ಸರ್ಕಾರ ಇದ್ದಾಗ, ಇದೇ ರೀತಿ ಆರೋಪವೊಂದು ಮೈತ್ರಿಕೂಟದ ನೇತೃತ್ವ ವಹಿಸಿದ್ದ ಕಾಂಗ್ರೆಸ್ ವಿರುದ್ಧವೂ ಕೇಳಿಬಂದಿತ್ತು. ಅಂದರೆ, ಅಧಿಕಾರಸ್ಥರೊಂದಿಗಿನ ನಂಟನ್ನು ದುರ್ಬಳಕೆ ಮಾಡಿಕೊಂಡಿರುವುದೇ ಪ್ರಮುಖ ಆರೋಪವಾಗಿತ್ತು. ವ್ಯತ್ಯಾಸ ಎಂದರೆ, ಚಿನ್ನದ ಕಳ್ಳ ಸಾಗಾಣಿಕೆ ಎಂಬುದು ಈಗಿನ ಆರೋಪ. ಆಗ, ಸೋಲಾರ್ ವಿದ್ಯುತ್ ಯೋಜನೆ ಹೆಸರಿನಲ್ಲಿ ಹಲವರಿಗೆ ವಂಚಿಸಿದ ಆರೋಪ.