ಶ್ರೀನಗರ: ಅಮರನಾಥ ಯಾತ್ರೆ ಕೈಗೊಂಡಿದ್ದ ಯಾತ್ರಿಕರಿಬ್ಬರು ಮೃತಪಟ್ಟಿದ್ದು, ಇದರೊಂದಿಗೆ ಈ ವರ್ಷದ ಯಾತ್ರೆ ವೇಳೆ ಮೃತಪಟ್ಟವರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಯಾತ್ರಿಕರಿಬ್ಬರೂ ರಾಜಸ್ಥಾನದವರಾಗಿದ್ದು, ಪತೇ ಲಾಲ್ ಮನಾರಿಯಾ ಮತ್ತು ಮಂಗಿ ಲಾಲ್ ಎಂದು ಗುರುತಿಸಲಾಗಿದೆ. ಇಬ್ಬರಿಗೂ 60 ವರ್ಷ ವಯಸ್ಸಾಗಿದೆ. ಫತೇಹ್ ಲಾಲ್ ಅವರು ಪವಿತ್ರ ಗುಹಾಲಯದ ಸಮೀಪ ಮತ್ತು ಮಂಗಿಲಾಲ್ ಅವರು ಬಲ್ತಾಲ್ ಮೂಲ ಶಿಬಿರದ ಬಳಿ ಮೃತಪಟ್ಟಿದ್ದಾರೆ.
ಮನಾರಿಯಾ ಅವರಿಗೆ ಹೃದಯ ಸ್ತಂಭನವಾಗಿದೆ. ಮಂಗಿಲಾಲ್ ಅವರ ಸಾವಿಗೆ ಕಾರಣವೇನೆಂಬುದು ಇನ್ನಷ್ಟೇ ಖಚಿತವಾಗಬೇಕಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.