‘ಎಲ್ಲ ಅಭ್ಯರ್ಥಿಗಳನ್ನು ಪಕ್ಷದ ಅಧ್ಯಕ್ಷರೂ ಆದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ನಿರ್ಧರಿಸಿದ್ದಾರೆ. 6 ಹಿಂದುಳಿದ, 5 ಅತಿ ಹಿಂದುಳಿದ, ಒಬ್ಬ ದಲಿತ, ಒಬ್ಬ ಮುಸ್ಲಿಂ, ಇಬ್ಬರು ಮಹಿಳೆಯರು ಮತ್ತು ಪ್ರಬಲ ಸಮುದಾಯದ 3 ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಸಮಾಜದ ಎಲ್ಲ ವರ್ಗಗಳಿಗೂ ಸೂಕ್ತ ಪ್ರಾತಿನಿಧ್ಯ ಸಿಗುವಂತೆ ಎಚ್ಚರಿಕೆ ವಹಿಸಲಾಗಿದೆ’ ಎಂದು ಸಂಜಯ್ ಕುಮಾರ್ ಝಾ ತಿಳಿಸಿದರು.