ನವದೆಹಲಿ: ವೈಯಕ್ತಿಕ ದತ್ತಾಂಶಗಳ ರಕ್ಷಣೆ ಮಸೂದೆ ಪರಿಶೀಲಿಸುವ ಜಂಟಿ ಸದನ ಸಮಿತಿಗೆ(ಜೆಪಿಸಿ) ತನ್ನ ವರದಿಯನ್ನು ಸಲ್ಲಿಸಲು ನೀಡಿದ್ದ ಗಡುವನ್ನು ಮುಂಗಾರು ಅಧಿವೇಶನದವರೆಗೆ ವಿಸ್ತರಿಸಲಾಗಿದೆ.
2019ರಲ್ಲಿ ಸದನ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿ ಬಜೆಟ್ ಅಧಿವೇಶನದಲ್ಲಿ ತನ್ನ ವರದಿಯನ್ನು ಸಲ್ಲಿಸುವ ನಿರೀಕ್ಷೆ ಇತ್ತು.
ಆಡಳಿತಾರೂಢ ಬಿಜೆಪಿ ಪಕ್ಷದ ಮೀನಾಕ್ಷಿ ಲೇಖಿ ಅವರು ಲೋಕಸಭೆಯಲ್ಲಿ, ಜೆಪಿಸಿ ವರದಿ ಸಲ್ಲಿಸಲು ಮುಂಗಾರು ಅಧಿವೇಶನದವರೆಗೆ ಸಮಯ ವಿಸ್ತರಣೆ ಕುರಿತು ನಿರ್ಣಯ ಮಂಡಿಸಿದರು. ಈ ನಿರ್ಣಯವನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.