ತಮಿಳುನಾಡನ್ನು ದ್ರಾವಿಡ ಆಂದೋಲನದ ಕೋಟೆಯನ್ನಾಗಿ ಕಟ್ಟಿದವರಲ್ಲಿ ಕರುಣಾನಿಧಿ ಅಗ್ರಗಣ್ಯರು, ಮೂವತ್ತರ ದಶಕದ ಎಲ್ಲ ಯುವಕರಂತೆ ಎಡಪಂಥೀಯ ವಿಚಾರಗಳಿಂದ ಪ್ರಭಾವಿತರಾಗಿದ್ದ ಕರುಣಾನಿಧಿ ತಮ್ಮ ಮಗನಿಗೆ ರಷ್ಯದ ಕ್ರಾಂತಿನಾಯಕ ಸ್ಟಾಲಿನ್ ಅವರ ಹೆಸರನ್ನಿಟ್ಟಿದ್ದರು. ಅಣ್ಣಾದೊರೈ ನಂತರ ಡಿಎಂಕೆ ಪಕ್ಷದ ಸಾರಥ್ಯ ವಹಿಸಿ ಕಾಂಗ್ರೆಸ್, ಬಿಜೆಪಿಗಳು ರಾಜ್ಯದಲ್ಲಿ ಕಾಲಿಡದಂತೆ ನೋಡಿಕೊಂಡರು.