‘ಈ ಬದಲಾವಣೆಯ ನಂತರ, ಕಾಶ್ಮೀರದಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಿಸುತ್ತದೆ. ಉಗ್ರರ ಉಪಟಳ ಕಡಿಮೆಯಾಗುತ್ತದೆ. ಕಣಿವೆ ರಾಜ್ಯ ಅಭಿವೃದ್ಧಿಯಲ್ಲಿ ಪ್ರಗತಿ ಕಾಣುತ್ತದೆ ಎಂದೆಲ್ಲ ಸರ್ಕಾರ ಹೇಳಿಕೊಂಡಿತ್ತು. ಆದರೆ, ವಿಶೇಷ ಸ್ಥಾನ ರದ್ದಾದ ನಂತರ, ಉಗ್ರರ ಉಪಟಳ ಕಡಿಮೆಯಾಗುವ ಬದಲು ಹೆಚ್ಚಾಗಿದೆ. ಅಭಿವೃದ್ಧಿಯಲ್ಲಿ ಯಾವುದೇ ಪ್ರಗತಿಯಾಗಿಲ್ಲ‘ ಎಂದು ದೂರಿದ್ದಾರೆ.