ಪಕ್ಷದ ರಾಜ್ಯ ಘಟಕದ ನಿಲುವಿನಲ್ಲಿ ಅಸ್ಪಷ್ಟತೆ ಕುರಿತು ಗಮನಸೆಳೆದಾಗ ಥಾಮಸ್ ಅವರು, ಭವಿಷ್ಯದ ಹೆಜ್ಜೆ ಕುರಿತೂ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದರು. ಇನ್ನೊಂದೆಡೆ, ಪಕ್ಷದ ನಾಯಕರಾದ ಸಿ.ಎಂ.ಇಬ್ರಾಹಿಂ ಮತ್ತು ಸಿ.ಕೆ.ನಾನು ಅವರು ಕರೆದಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಕುರಿತಂತೆಯೂ ರಾಜ್ಯ ಘಟಕವು ಅಂತರವನ್ನು ಕಾಯ್ದುಕೊಂಡಿದೆ.