‘ವಿಶ್ವವಿದ್ಯಾಲಯದ ಘಟಿಕೋತ್ಸವ 10 ವರ್ಷದಿಂದ ನಡೆದಿರಲಿಲ್ಲ. ಚರ್ಚೆಯ ವೇಳೆ ನಾನು ದೆಹಲಿಯಿಂದ ಪ್ರಮುಖರನ್ನು (ರಾಷ್ಟ್ರಪತಿ) ಕರೆತರುವ ಕುರಿತು ಸಲಹೆ ಮಾಡಿದ್ದೆ. ಘಟಿಕೋತ್ಸವದಲ್ಲಿಯೇ, ನಿಯಮದ ಅನುಸಾರ ರಾಷ್ಟ್ರಪತಿಗೆ ಡಿ.ಲಿಟ್ ಪದವಿ ನೀಡುವ ಕುರಿತು ಚಿಂತಿಸಬಹುದು ಎಂದೂ ಹೇಳಿದ್ದೆ. ರಾಷ್ಟ್ರಪತಿ ಭವನದ ನೀತಿಯಂತೆ ರಾಷ್ಟ್ರಪತಿಗಳು ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲ. ಇದು, ವಿಶೇಷ ಪ್ರಕರಣ, ಇದು ಹಳೆಯ ವಿಶ್ವವಿದ್ಯಾಲಯ ಎಂದು ಅವರ ಮನವೊಲಿಸುವುದಾಗಿಯೂ ಭರವಸೆ ನೀಡಿದ್ದೆ‘ ಎಂದು ಹೇಳಿದರು.