2017ರ ಸೆಪ್ಟಂಬರ್23ರಂದು ಶಿವಮೊಗ್ಗದ ತ್ರಿಮೂರ್ತಿ ನಗರದ ಬಳಿಯ ತುಂಗಾ ನೀರಾವರಿ ಕಾಲುವೆಗೆ ಜಾರಿ ಬಿದ್ದು ಮುಳುಗತೊಡಗಿದ್ದ ಇಬ್ಬರು ಚಿಣ್ಣರ ಪೈಕಿ ಒಬ್ಬನನ್ನು ಕಾಪಾಡಿದ ಸಾಹಸಿ ಕೃಷ್ಣಾನಾಯ್ಕ ಒಂಬತ್ತನೆಯ ತರಗತಿಯ ವಿದ್ಯಾರ್ಥಿ. ಸೈಕಲ್ ತುಳಿದುಕೊಂಡು ಮಾರುಕಟ್ಟೆಗೆ ಹೊರಟಿದ್ದ ಈತನ ಕಣ್ಣಿಗೆ ನೀರಲ್ಲಿ ಮುಳುಗುತ್ತಿದ್ದ ಎಂಟು-ಹತ್ತು ವರ್ಷ ವಯಸ್ಸಿನ ಇಬ್ಬರು ಬಾಲಕರು ಕಂಡರು.