ನವದೆಹಲಿ: ಐಎಫ್ಸಿಐ ಲಿಮಿಟೆಡ್ ಕಂಪನಿಗೆ ₹50 ಕೋಟಿ ಸಾಲ ಮರುಪಾವತಿ ಪ್ರಕರಣಕ್ಕೆ ಸಂಬಂಧಿಸಿ ದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಕಂಪನಿ ಪಡೆದಿರುವ ಸಾಲಕ್ಕೆ ತಾವು ಖಾತರಿದಾರರಲ್ಲ ಮತ್ತು ಸಾಲ ಪಡೆದವರೂ ಅಲ್ಲ ಎಂದು ರಾಜೀವ್ ಪರ ವಕೀಲ ಮುಕುಲ್ ರೋಹಟಗಿ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು.
ಈ ಪ್ರಕರಣದ ಬಗ್ಗೆ ಸಾಲ ವಸೂಲಾತಿ ನ್ಯಾಯಮಂಡಳಿ 2018ರ ಜುಲೈ 20ರಂದು ನೀಡಿದ್ದ ತೀರ್ಪಿನಲ್ಲಿ ಯಾವುದೇ ತಪ್ಪು ಇಲ್ಲ ಅಥವಾ ಕಾನೂನುಬಾಹಿರವಾಗಿಲ್ಲ ಎಂದು2020ರ ಜನವರಿ 14ರಂದು ಹೈಕೋರ್ಟ್ನ ವಿಭಾಗೀಯ ಪೀಠ ತೀರ್ಪು ನೀಡಿತ್ತು.