ಪುರಂದರ ಕ್ಷೇತ್ರದಿಂದ ಮೂರು ಬಾರಿ ಗೆದ್ದು ಶಾಸಕ, ಮಂತ್ರಿಯಾಗಿದ್ದ ಶಿವತಾರೆ, ಉದ್ಧವ್ ಠಾಕ್ರೆ ಬಣ ತ್ಯಜಿಸಿ ಏಕನಾಥ್ ಶಿಂದೆ ಬಣ ಸೇರಿದ್ದರು. ಬಾರಾಮತಿಯಲ್ಲಿ ‘ಬಾಪು’ ಎಂದು ಖ್ಯಾತರಾಗಿರುವ ಶಿವತಾರೆ, ಪವಾರ್ ಕುಟುಂಬದ ವಿರೋಧಿ ಎಂದೇ ಖ್ಯಾತರಾಗಿದ್ದಾರೆ. ಎನ್ಸಿಪಿ ಹೋಳಾಗುವ ಮುನ್ನ 2019ರ ವಿಧಾನಸಭಾ ಚುನಾವಣೆಯಲ್ಲಿ, ಶಿವತಾರೆ ಅವರನ್ನು ಅಜಿತ್ ಪವಾರ್ ಸೋಲುವಂತೆ ಮಾಡಿದ್ದರು.