<p><strong>ಬಲ್ಲಿಯಾ (ಉತ್ತರ ಪ್ರದೇಶ)</strong>: ಶ್ರೀರಾಮನ ಪರಮ ಭಕ್ತ ಹನುಮಂತ ಹುಟ್ಟಿದ್ದು ರಾಜಭರ್ ಜಾತಿಯಲ್ಲಿ ಎಂದು ರಾಜ್ಯದ ಪಂಚಾಯತ್ ರಾಜ್ ಸಚಿವ ಓಂ ಪ್ರಕಾಶ್ ರಾಜಭರ್ ಅವರು ಶನಿವಾರ ಹೇಳಿದ್ದಾರೆ.</p><p>ಬಿಜೆಪಿಯ ಮಿತ್ರ ಪಕ್ಷ ಸುಹೇಲ್ದೇವ್ ಭಾರತೀಯ ಸಮಾಜ್ ಪಾರ್ಟಿ (ಎಬಿಎಸ್ಪಿ) ಮುಖ್ಯಸ್ಥರಾಗಿರುವ ಓಂ ಪ್ರಕಾಶ್, ಜಿಲ್ಲೆಯ ವಾಸುದೇವ ಗ್ರಾಮದ ಮುಖ್ಯದ್ವಾರದ ಬಳಿ ಸುಹೇಲ್ದೇವ್ ಮಹಾರಾಜರ ಪ್ರತಿಮೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದಾರೆ.</p><p>'ಹುನಮಂತ ರಾಜಭರ್ ಜಾತಿಯಲ್ಲಿ ಹುಟ್ಟಿದ್ದರು. ರಾಕ್ಷಸ ಅಹಿರಾವಣ್, ರಾಮ ಮತ್ತು ಲಕ್ಷ್ಮಣರನ್ನು ಪತಾಳಪುರಿಗೆ ಹೊತ್ತೊಯ್ದ ಸಂದರ್ಭದಲ್ಲಿ, ಅವರನ್ನು ವಾಪಸ್ ಕರೆತರುವ ಧೈರ್ಯವನ್ನು ಯಾರೂ ಮಾಡಿರಲಿಲ್ಲ. ರಾಜಭರ್ ಜಾತಿಯಲ್ಲಿ ಹುಟ್ಟಿದ್ದ ಹನುಮಂತ ಮಾತ್ರವೇ ಅಂತಹ ಧೈರ್ಯ ತೋರಿದ್ದರು' ಎಂದು ಹೇಳಿದ್ದಾರೆ.</p><p>ಡಾ.ಬಿ.ಆರ್. ಅಂಬೇಡ್ಕರ್ ಅವರ ವಿರುದ್ಧ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ (ಎಸ್ಪಿ) ಪ್ರತಿಭಟನೆ ನಡೆಸುತ್ತಿರುವ ಬಗ್ಗೆಯೂ ಸಚಿವ ಕಿಡಿಕಾರಿದ್ದಾರೆ.</p><p>'ಅಂಬೇಡ್ಕರ್ ಹೆಸರು 2012ಕ್ಕೂ ಮುನ್ನ ಸಮಾಜವಾದಿ ಪಕ್ಷದವರನ್ನು ಸಾಕಷ್ಟು ಕೆರಳಿಸಿತ್ತು. ಅಧಿಕಾರಕ್ಕೇರಿದ ಮರುದಿನವೇ ಲಖನೌನಲ್ಲಿರುವ ಅಂಬೇಡ್ಕರ್ ಉದ್ಯಾನವನ್ನು ನೆಲಸಮಗೊಳಿಸುವುದಾಗಿ ಮತ್ತು ಶೌಚಾಲಯಗಳನ್ನು ನಿರ್ಮಿಸುವುದಾಗಿ ಆ ಪಕ್ಷ ಘೋಷಿಸಿತ್ತು' ಎಂದು ಆರೋಪಿಸಿದ್ದಾರೆ.</p>.ದಕ್ಷಿಣ ಕೊರಿಯಾ: ಲ್ಯಾಂಡಿಂಗ್ ವೇಳೆ ಗೋಡೆಗೆ ಡಿಕ್ಕಿಯಾದ ವಿಮಾನ; ಕನಿಷ್ಠ 120 ಸಾವು.ಒಡಿಶಾ: ಬುಡಕಟ್ಟು ಕುಟುಂಬಗಳ ಮತಾಂತರಕ್ಕೆ ಯತ್ನ; ಮೂವರನ್ನು ಮರಕ್ಕೆ ಕಟ್ಟಿ ಹಲ್ಲೆ.<p>'ಈಗ ಸಂವಿಧಾನದ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್, ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಲಕ್ಷಾಂತರ ಜನರನ್ನು, ಪತ್ರಕರ್ತರನ್ನು ಜೈಲಿಗಟ್ಟಿತ್ತು. ಇಂದು ಅಂಬೇಡ್ಕರ್ ಅವರ ಬಗ್ಗೆ ಭಾರಿ ಪ್ರೀತಿ ತೋರುತ್ತಿದೆ. ಈ ಹಿಂದೆ ಅವರು ದೇವರಾಗಿರಲಿಲ್ಲವೇ' ಎಂದು ಕೇಳಿದ್ದಾರೆ.</p><p>ಅಂಬೇಡ್ಕರ್ ಹೆಸರಿನಲ್ಲಿ ಜಾರಿಯಾಗಿದ್ದ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೊನೆಗಾಣಿಸುವ ಮೂಲಕ, ಲಕ್ಷಾಂತರ ಬದುಕನ್ನು ಎಸ್ಪಿ ಹಾಳುಮಾಡಿದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಲ್ಲಿಯಾ (ಉತ್ತರ ಪ್ರದೇಶ)</strong>: ಶ್ರೀರಾಮನ ಪರಮ ಭಕ್ತ ಹನುಮಂತ ಹುಟ್ಟಿದ್ದು ರಾಜಭರ್ ಜಾತಿಯಲ್ಲಿ ಎಂದು ರಾಜ್ಯದ ಪಂಚಾಯತ್ ರಾಜ್ ಸಚಿವ ಓಂ ಪ್ರಕಾಶ್ ರಾಜಭರ್ ಅವರು ಶನಿವಾರ ಹೇಳಿದ್ದಾರೆ.</p><p>ಬಿಜೆಪಿಯ ಮಿತ್ರ ಪಕ್ಷ ಸುಹೇಲ್ದೇವ್ ಭಾರತೀಯ ಸಮಾಜ್ ಪಾರ್ಟಿ (ಎಬಿಎಸ್ಪಿ) ಮುಖ್ಯಸ್ಥರಾಗಿರುವ ಓಂ ಪ್ರಕಾಶ್, ಜಿಲ್ಲೆಯ ವಾಸುದೇವ ಗ್ರಾಮದ ಮುಖ್ಯದ್ವಾರದ ಬಳಿ ಸುಹೇಲ್ದೇವ್ ಮಹಾರಾಜರ ಪ್ರತಿಮೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದಾರೆ.</p><p>'ಹುನಮಂತ ರಾಜಭರ್ ಜಾತಿಯಲ್ಲಿ ಹುಟ್ಟಿದ್ದರು. ರಾಕ್ಷಸ ಅಹಿರಾವಣ್, ರಾಮ ಮತ್ತು ಲಕ್ಷ್ಮಣರನ್ನು ಪತಾಳಪುರಿಗೆ ಹೊತ್ತೊಯ್ದ ಸಂದರ್ಭದಲ್ಲಿ, ಅವರನ್ನು ವಾಪಸ್ ಕರೆತರುವ ಧೈರ್ಯವನ್ನು ಯಾರೂ ಮಾಡಿರಲಿಲ್ಲ. ರಾಜಭರ್ ಜಾತಿಯಲ್ಲಿ ಹುಟ್ಟಿದ್ದ ಹನುಮಂತ ಮಾತ್ರವೇ ಅಂತಹ ಧೈರ್ಯ ತೋರಿದ್ದರು' ಎಂದು ಹೇಳಿದ್ದಾರೆ.</p><p>ಡಾ.ಬಿ.ಆರ್. ಅಂಬೇಡ್ಕರ್ ಅವರ ವಿರುದ್ಧ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ (ಎಸ್ಪಿ) ಪ್ರತಿಭಟನೆ ನಡೆಸುತ್ತಿರುವ ಬಗ್ಗೆಯೂ ಸಚಿವ ಕಿಡಿಕಾರಿದ್ದಾರೆ.</p><p>'ಅಂಬೇಡ್ಕರ್ ಹೆಸರು 2012ಕ್ಕೂ ಮುನ್ನ ಸಮಾಜವಾದಿ ಪಕ್ಷದವರನ್ನು ಸಾಕಷ್ಟು ಕೆರಳಿಸಿತ್ತು. ಅಧಿಕಾರಕ್ಕೇರಿದ ಮರುದಿನವೇ ಲಖನೌನಲ್ಲಿರುವ ಅಂಬೇಡ್ಕರ್ ಉದ್ಯಾನವನ್ನು ನೆಲಸಮಗೊಳಿಸುವುದಾಗಿ ಮತ್ತು ಶೌಚಾಲಯಗಳನ್ನು ನಿರ್ಮಿಸುವುದಾಗಿ ಆ ಪಕ್ಷ ಘೋಷಿಸಿತ್ತು' ಎಂದು ಆರೋಪಿಸಿದ್ದಾರೆ.</p>.ದಕ್ಷಿಣ ಕೊರಿಯಾ: ಲ್ಯಾಂಡಿಂಗ್ ವೇಳೆ ಗೋಡೆಗೆ ಡಿಕ್ಕಿಯಾದ ವಿಮಾನ; ಕನಿಷ್ಠ 120 ಸಾವು.ಒಡಿಶಾ: ಬುಡಕಟ್ಟು ಕುಟುಂಬಗಳ ಮತಾಂತರಕ್ಕೆ ಯತ್ನ; ಮೂವರನ್ನು ಮರಕ್ಕೆ ಕಟ್ಟಿ ಹಲ್ಲೆ.<p>'ಈಗ ಸಂವಿಧಾನದ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್, ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಲಕ್ಷಾಂತರ ಜನರನ್ನು, ಪತ್ರಕರ್ತರನ್ನು ಜೈಲಿಗಟ್ಟಿತ್ತು. ಇಂದು ಅಂಬೇಡ್ಕರ್ ಅವರ ಬಗ್ಗೆ ಭಾರಿ ಪ್ರೀತಿ ತೋರುತ್ತಿದೆ. ಈ ಹಿಂದೆ ಅವರು ದೇವರಾಗಿರಲಿಲ್ಲವೇ' ಎಂದು ಕೇಳಿದ್ದಾರೆ.</p><p>ಅಂಬೇಡ್ಕರ್ ಹೆಸರಿನಲ್ಲಿ ಜಾರಿಯಾಗಿದ್ದ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೊನೆಗಾಣಿಸುವ ಮೂಲಕ, ಲಕ್ಷಾಂತರ ಬದುಕನ್ನು ಎಸ್ಪಿ ಹಾಳುಮಾಡಿದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>