ರಾಯ್ಬರೇಲಿ: ಕಾಂಗ್ರೆಸ್ ಪಕ್ಷವು ಅಮೇಠಿಯಲ್ಲಿ ಸ್ಥಳೀಯ ಮುಖಂಡರನ್ನು ಕಣಕ್ಕಿಳಿಸದೆ ‘ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಗುಮಾಸ್ತ’ನನ್ನು ಸ್ಪರ್ಧೆಗಿಳಿಸಿದೆ ಎಂದು ರಾಯ್ಬರೇಲಿಯ ಬಿಜೆಪಿ ಅಭ್ಯರ್ಥಿ ದಿನೇಶ್ ಪ್ರತಾಪ್ ಸಿಂಗ್ ಲೇವಡಿ ಮಾಡಿದರು.
ಕಾಂಗ್ರೆಸ್ ಪಕ್ಷವು ಅಮೇಠಿ ಕ್ಷೇತ್ರದಿಂದ ಕಿಶೋರಿ ಲಾಲ್ ಶರ್ಮಾ ಅವರನ್ನು ಕಣಕ್ಕಿಳಿಸಿದೆ. ಶರ್ಮಾ ಅವರು ಗಾಂಧಿ ಕುಟುಂಬದ ಆಪ್ತರೂ ಹೌದು. ‘ಅಮೇಠಿಯಲ್ಲಿ ಕಾಂಗ್ರೆಸ್ಗೆ ಸ್ಥಳೀಯ ನಾಯಕರು ಇಲ್ಲವೇ? ಇಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಿಯಾಂಕಾ ಅವರ ‘ಗುಮಾಸ್ತ’ನನ್ನು ಲುಧಿಯಾನದಿಂದ ಕರೆತಂದಿದೆ’ ಎಂದು ದೂರಿದರು.