ರಾಜ್ಯದಲ್ಲಿ ಈ ಬಾರಿ ಅತ್ಯಂತ ಅಚ್ಚರಿಯ ಫಲಿತಾಂಶ ಎಂದರೆ, ಅದು ತ್ರಿಶೂರ್ ಕ್ಷೇತ್ರದ್ದು. ಈ ಕ್ಷೇತ್ರದಿಂದ ನಟ ಸುರೇಶ್ ಗೋಪಿ ಜಯಗಳಿಸಿದ್ದು, ಕೇರಳದಲ್ಲಿ ಬಿಜೆಪಿ ಶಕೆ ಆರಂಭವಾಗಿದೆ. ಇನ್ನೊಂದೆಡೆ ಎಡಪಕ್ಷಗಳ ಕೂಟ ಎಲ್ಡಿಎಫ್ ಕೇವಲ ಒಂದು ಕ್ಷೇತ್ರದಲ್ಲಿ (ಆಲತ್ತೂರ್) ಗೆಲ್ಲುವುದರ ಮೂಲಕ ತನ್ನ ಅಸ್ತಿತ್ವ ಉಳಿಸಿಕೊಂಡಿದೆ.