ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಪಶ್ಚಿಮ ಭಾರತದ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘ, ಭಾರತದ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮಿಗಳ ಸಂಘವು ಸ್ವಾಗತಿಸಿದೆ. ಕೋವಿಡ್ 19 ಹೊಡೆತದಿಂದಾಗಿ ಜಾರಿಗೆ ಬಂದ ಲಾಕ್ ಡೌನ್ನಿಂದಾಗಿ ಹೋಟೆಲ್ ಉದ್ಯಮವು ಭಾರೀ ನಷ್ಟ ಅನುಭವಿಸಿದೆ. ಇನ್ನೇನು ಚೇತರಿಸಿಕೊಳ್ಳುವಷ್ಟರಲ್ಲಿ ಬ್ರಿಟನ್ನಿನಿಂದ ಹರಡುತ್ತಿರುವ ಹೊಸ ಬಗೆಯ ಕೊರೋನಾ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಗರ ವಲಯದಲ್ಲಿ ಡಿಸೆಂಬರ್ 22ರಿಂದ ನೈಟ್ ಕರ್ಫ್ಯೂ ವಿಧಿಸಲಾಗಿದೆ. ಹಾಗಾಗಿ, ಕ್ರಿಸ್ಮಸ್ ಮತ್ತು ಹೊಸವರ್ಷಾಚರಣೆ ಸಂದರ್ಭದಲ್ಲೂ ಹೋಟೆಲ್ ಉದ್ಯಮದ ನಷ್ಟದತ್ತ ಸಾಗಿದೆ. ಸರ್ಕಾರದ ಈ ನಿರ್ಧಾರವು ಹೋಟೆಲ್ ಉದ್ಯಮಕ್ಕೆ ತುಂಬಾ ಸಹಕಾರಿಯಾಗಲಿದೆ.