ನವದೆಹಲಿ: ಆಕ್ಷೇಪಾರ್ಹವಾದ ಹೇಳಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮಂಗಳವಾರ ನಿಗದಿಯಾಗಿದ್ದ ಲೋಕಸಭೆಯ ಹಕ್ಕುಬಾಧ್ಯತಾ ಸಮಿತಿ ಸಭೆಗೆ ಬಿಜೆಪಿ ಸಂಸದ ರಮೇಶ್ ಬಿಧೂಢಿ ಗೈರುಹಾಜರಾದರು.
ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ಅವರ ವಿರುದ್ಧ ಸದನದಲ್ಲಿಯೇ ಆಕ್ಷೇಪಾರ್ಹವಾದ ಪದವನ್ನು ಬಳಸಿರುವ ಆರೋಪ ಇವರ ಮೇಲಿದೆ. ಈ ಪ್ರಕರಣದ ವಿಚಾರಣೆಯನ್ನು ಸ್ಪೀಕರ್ ಅವರು ಹಕ್ಕುಬಾಧ್ಯತಾ ಸಮಿತಿಗೆ ಒಪ್ಪಿಸಿದ್ದಾರೆ.
ಪೂರ್ವನಿಗದಿತ ಕಾರ್ಯಕ್ರಮಗಳಿಂದಾಗಿ ಬರಲಾಗುತ್ತಿಲ್ಲ ಎಂದು ಬಿಧೂಢಿ ಕಾರಣ ನೀಡಿದ್ದಾರೆ. ಬಿಧೂಡಿ ಅವರು ಸದ್ಯ ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ತೊಂಕ್ ಜಿಲ್ಲೆಯ ಉಸ್ತುವಾರಿಯಾಗಿ ಅವರನ್ನು ಬಿಜೆಪಿ ನೇಮಿಸಿದೆ.