<p><strong>ತಿರುವನಂತಪುರ</strong>: ಕೇರಳದ ರಾಜಧಾನಿ ತಿರುವನಂತಪುರದಲ್ಲಿರುವ ಪ್ರಸಿದ್ಧ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯದಲ್ಲಿ 270 ವರ್ಷಗಳ ಬಳಿಕ ಇಂದು ಮಹಾಕುಂಭಾಭಿಷೇಕ ನೆರವೇರಿತು. ನೂರಾರು ಭಕ್ತರು ಈ ಕ್ಷಣಕ್ಕೆ ಸಾಕ್ಷಿಯಾದರು.</p><p>ಈ ಪ್ರಾಚೀನ ದೇಗುಲದ ನವೀಕರಣ ಕಾರ್ಯ ಇತ್ತೀಚೆಗೆ ಮುಕ್ತಾಯವಾಗಿತ್ತು.</p><p>ವಿಶ್ವಕ್ಸೇನ ವಿಗ್ರಹದ ಪುನರ್ ಪ್ರತಿಷ್ಠಾಪನೆ ಮತ್ತು ತಿರುವಂಬಾಡಿ ಶ್ರೀ ಕೃಷ್ಣ ದೇವಾಲಯದಲ್ಲಿ (ಮುಖ್ಯ ದೇವಾಲಯ ಸಂಕೀರ್ಣದೊಳಗೆ ಇದೆ) 'ಅಷ್ಟಬಂಧ ಕಳಸ'ಗಳ ಲೋಕಾರ್ಪಣೆ ಬೆಳಿಗ್ಗೆ ನಡೆಯಿತು ಎಂದು ದೇವಾಲಯದ ಮೂಲಗಳು ತಿಳಿಸಿವೆ.</p><p>ಭಾನುವಾರ ಬೆಳಿಗ್ಗೆ 7.40ರಿಂದ 8.40 ರ ನಡುವಿನ ಶುಭ ಸಮಯದಲ್ಲಿ ಅರ್ಚಕರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು ಎಂದು ಅವರು ಹೇಳಿದ್ದಾರೆ.</p><p>ತಿರುವಾಂಕೂರು ರಾಜಮನೆತನದ ಪ್ರಸ್ತುತ ಮುಖ್ಯಸ್ಥ ಮೂಲಂ ತಿರುನಾಳ್ ರಾಮ ವರ್ಮ ಅವರು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಧಾರ್ಮಿಕ ವಿಧಿಗಳು ಪ್ರಾರಂಭವಾದವು.</p><p>ವರ್ಮಾ ಮತ್ತು ಇತರ ರಾಜಮನೆತನದ ಸದಸ್ಯರ ಸಮ್ಮುಖದಲ್ಲಿ, ತಂತ್ರಿ (ಮುಖ್ಯ ಅರ್ಚಕ) ಮೊದಲು ತಿರುವಂಬಾಡಿ ದೇವಾಲಯದಲ್ಲಿ ಅಷ್ಟಬಂಧ ಕಳಸಂ ಅನ್ನು ನೆರವೇರಿಸಿದರು. ನಂತರ, ವಿಶ್ವಕ್ಸೇನ ವಿಗ್ರಹದ ಪುನರ್ ಪ್ರತಿಷ್ಠಾಪನೆ ಬೆಳಿಗ್ಗೆ 8.00ಗಂಟೆಗೆ ನಡೆಯಿತು ಎಂದು ದೇವಾಲಯದ ಮೂಲಗಳು ತಿಳಿಸಿವೆ.</p><p>ಈಗ ನವೀಕರಿಸಿ ಪುನಃ ಸ್ಥಾಪಿಸಲಾದ ವಿಶ್ವಕ್ಸೇನ ವಿಗ್ರಹವು ಸುಮಾರು 300 ವರ್ಷಗಳಷ್ಟು ಹಳೆಯದಾಗಿದ್ದು, ‘ಕಟು ಸರ್ಕಾರ ಯೋಗ’ದಲ್ಲಿ ನಿರ್ಮಿಸಲಾಗಿದೆ.</p><p>ಕೇರಳ ರಾಜ್ಯಪಾಲ ವಿಶ್ವನಾಥ್ ರಾಜೇಂದ್ರ ಅರ್ಲೇಕರ್ ಅವರು ಅಪರೂಪದ ಆಚರಣೆಯನ್ನು ವೀಕ್ಷಿಸಲು ದೇವಾಲಯದಲ್ಲಿ ಹಾಜರಿದ್ದರು ಎಂದು ಅವರು ಹೇಳಿದರು.</p><p>ಮಹಾ ಕುಂಭಾಭಿಷೇಕಕ್ಕೂ ಮೊದಲು ಕಳೆದ ವಾರ ಆಚಾರ್ಯ ವಾರಣಂ, ಪ್ರಸಾದ ಶುದ್ಧಿ, ಧಾರ, ಕಲಸಂ ಮತ್ತು ಇತರ ಆಚರಣೆಗಳನ್ನು ದೇವಾಲಯದಲ್ಲಿ ನಡೆಸಲಾಯಿತು.</p><p>ಮಹಾ ಕುಂಭಾಭಿಷೇಕದ ಉದ್ದೇಶವು ಆಧ್ಯಾತ್ಮಿಕ ಶಕ್ತಿಯನ್ನು ಬಲಪಡಿಸುವುದು ಮತ್ತು ದೇವಾಲಯದ ಪಾವಿತ್ರ್ಯವನ್ನು ಪುನರುಜ್ಜೀವನಗೊಳಿಸುವುದು ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.</p><p>ಶತಮಾನಗಳಷ್ಟು ಹಳೆಯದಾದ ಈ ದೇವಾಲಯದಲ್ಲಿ 270 ವರ್ಷಗಳಿಗೂ ಹೆಚ್ಚಿನ ಅವಧಿಯ ನಂತರ ಇಂತಹ ಸಮಗ್ರ ನವೀಕರಣ ಮತ್ತು ಅದರ ಜೊತೆಗಿನ ಆಚರಣೆಗಳು ನಡೆದಿದೆ.</p><p>2017ರ ಸುಪ್ರೀಂ ಕೋರ್ಟ್ ನೇಮಿಸಿದ ತಜ್ಞರ ಸಮಿತಿಯ ನಿರ್ದೇಶನದಂತೆ ನವೀಕರಣವನ್ನು ಕೈಗೊಳ್ಳಲಾಗಿತ್ತು. ಕೆಲಸ ಶೀಘ್ರದಲ್ಲೇ ಪ್ರಾರಂಭವಾದರೂ, ಕೋವಿಡ್ ಪರಿಸ್ಥಿತಿಯಿಂದಾಗಿ ಅದು ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯವಾಗಿರಲಿಲ್ಲ.ನಂತರ, 2021 ರಿಂದ ಹಂತ ಹಂತವಾಗಿ ವಿವಿಧ ನವೀಕರಣ ಕಾರ್ಯಗಳನ್ನು ಪೂರ್ಣಗೊಳಿಸಲಾಯಿತು ಎಂದು ಅವರು ಹೇಳಿದ್ದಾರೆ.</p> .ಮಥುರಾ ದೇವಾಲಯದಲ್ಲಿ ನ್ಯಾಯಾಧೀಶೆಯ ಮಂಗಳಸೂತ್ರ ಕಳ್ಳತನ: 10 ಕಳ್ಳಿಯರ ಬಂಧನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ</strong>: ಕೇರಳದ ರಾಜಧಾನಿ ತಿರುವನಂತಪುರದಲ್ಲಿರುವ ಪ್ರಸಿದ್ಧ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯದಲ್ಲಿ 270 ವರ್ಷಗಳ ಬಳಿಕ ಇಂದು ಮಹಾಕುಂಭಾಭಿಷೇಕ ನೆರವೇರಿತು. ನೂರಾರು ಭಕ್ತರು ಈ ಕ್ಷಣಕ್ಕೆ ಸಾಕ್ಷಿಯಾದರು.</p><p>ಈ ಪ್ರಾಚೀನ ದೇಗುಲದ ನವೀಕರಣ ಕಾರ್ಯ ಇತ್ತೀಚೆಗೆ ಮುಕ್ತಾಯವಾಗಿತ್ತು.</p><p>ವಿಶ್ವಕ್ಸೇನ ವಿಗ್ರಹದ ಪುನರ್ ಪ್ರತಿಷ್ಠಾಪನೆ ಮತ್ತು ತಿರುವಂಬಾಡಿ ಶ್ರೀ ಕೃಷ್ಣ ದೇವಾಲಯದಲ್ಲಿ (ಮುಖ್ಯ ದೇವಾಲಯ ಸಂಕೀರ್ಣದೊಳಗೆ ಇದೆ) 'ಅಷ್ಟಬಂಧ ಕಳಸ'ಗಳ ಲೋಕಾರ್ಪಣೆ ಬೆಳಿಗ್ಗೆ ನಡೆಯಿತು ಎಂದು ದೇವಾಲಯದ ಮೂಲಗಳು ತಿಳಿಸಿವೆ.</p><p>ಭಾನುವಾರ ಬೆಳಿಗ್ಗೆ 7.40ರಿಂದ 8.40 ರ ನಡುವಿನ ಶುಭ ಸಮಯದಲ್ಲಿ ಅರ್ಚಕರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು ಎಂದು ಅವರು ಹೇಳಿದ್ದಾರೆ.</p><p>ತಿರುವಾಂಕೂರು ರಾಜಮನೆತನದ ಪ್ರಸ್ತುತ ಮುಖ್ಯಸ್ಥ ಮೂಲಂ ತಿರುನಾಳ್ ರಾಮ ವರ್ಮ ಅವರು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಧಾರ್ಮಿಕ ವಿಧಿಗಳು ಪ್ರಾರಂಭವಾದವು.</p><p>ವರ್ಮಾ ಮತ್ತು ಇತರ ರಾಜಮನೆತನದ ಸದಸ್ಯರ ಸಮ್ಮುಖದಲ್ಲಿ, ತಂತ್ರಿ (ಮುಖ್ಯ ಅರ್ಚಕ) ಮೊದಲು ತಿರುವಂಬಾಡಿ ದೇವಾಲಯದಲ್ಲಿ ಅಷ್ಟಬಂಧ ಕಳಸಂ ಅನ್ನು ನೆರವೇರಿಸಿದರು. ನಂತರ, ವಿಶ್ವಕ್ಸೇನ ವಿಗ್ರಹದ ಪುನರ್ ಪ್ರತಿಷ್ಠಾಪನೆ ಬೆಳಿಗ್ಗೆ 8.00ಗಂಟೆಗೆ ನಡೆಯಿತು ಎಂದು ದೇವಾಲಯದ ಮೂಲಗಳು ತಿಳಿಸಿವೆ.</p><p>ಈಗ ನವೀಕರಿಸಿ ಪುನಃ ಸ್ಥಾಪಿಸಲಾದ ವಿಶ್ವಕ್ಸೇನ ವಿಗ್ರಹವು ಸುಮಾರು 300 ವರ್ಷಗಳಷ್ಟು ಹಳೆಯದಾಗಿದ್ದು, ‘ಕಟು ಸರ್ಕಾರ ಯೋಗ’ದಲ್ಲಿ ನಿರ್ಮಿಸಲಾಗಿದೆ.</p><p>ಕೇರಳ ರಾಜ್ಯಪಾಲ ವಿಶ್ವನಾಥ್ ರಾಜೇಂದ್ರ ಅರ್ಲೇಕರ್ ಅವರು ಅಪರೂಪದ ಆಚರಣೆಯನ್ನು ವೀಕ್ಷಿಸಲು ದೇವಾಲಯದಲ್ಲಿ ಹಾಜರಿದ್ದರು ಎಂದು ಅವರು ಹೇಳಿದರು.</p><p>ಮಹಾ ಕುಂಭಾಭಿಷೇಕಕ್ಕೂ ಮೊದಲು ಕಳೆದ ವಾರ ಆಚಾರ್ಯ ವಾರಣಂ, ಪ್ರಸಾದ ಶುದ್ಧಿ, ಧಾರ, ಕಲಸಂ ಮತ್ತು ಇತರ ಆಚರಣೆಗಳನ್ನು ದೇವಾಲಯದಲ್ಲಿ ನಡೆಸಲಾಯಿತು.</p><p>ಮಹಾ ಕುಂಭಾಭಿಷೇಕದ ಉದ್ದೇಶವು ಆಧ್ಯಾತ್ಮಿಕ ಶಕ್ತಿಯನ್ನು ಬಲಪಡಿಸುವುದು ಮತ್ತು ದೇವಾಲಯದ ಪಾವಿತ್ರ್ಯವನ್ನು ಪುನರುಜ್ಜೀವನಗೊಳಿಸುವುದು ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.</p><p>ಶತಮಾನಗಳಷ್ಟು ಹಳೆಯದಾದ ಈ ದೇವಾಲಯದಲ್ಲಿ 270 ವರ್ಷಗಳಿಗೂ ಹೆಚ್ಚಿನ ಅವಧಿಯ ನಂತರ ಇಂತಹ ಸಮಗ್ರ ನವೀಕರಣ ಮತ್ತು ಅದರ ಜೊತೆಗಿನ ಆಚರಣೆಗಳು ನಡೆದಿದೆ.</p><p>2017ರ ಸುಪ್ರೀಂ ಕೋರ್ಟ್ ನೇಮಿಸಿದ ತಜ್ಞರ ಸಮಿತಿಯ ನಿರ್ದೇಶನದಂತೆ ನವೀಕರಣವನ್ನು ಕೈಗೊಳ್ಳಲಾಗಿತ್ತು. ಕೆಲಸ ಶೀಘ್ರದಲ್ಲೇ ಪ್ರಾರಂಭವಾದರೂ, ಕೋವಿಡ್ ಪರಿಸ್ಥಿತಿಯಿಂದಾಗಿ ಅದು ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯವಾಗಿರಲಿಲ್ಲ.ನಂತರ, 2021 ರಿಂದ ಹಂತ ಹಂತವಾಗಿ ವಿವಿಧ ನವೀಕರಣ ಕಾರ್ಯಗಳನ್ನು ಪೂರ್ಣಗೊಳಿಸಲಾಯಿತು ಎಂದು ಅವರು ಹೇಳಿದ್ದಾರೆ.</p> .ಮಥುರಾ ದೇವಾಲಯದಲ್ಲಿ ನ್ಯಾಯಾಧೀಶೆಯ ಮಂಗಳಸೂತ್ರ ಕಳ್ಳತನ: 10 ಕಳ್ಳಿಯರ ಬಂಧನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>