ರಜೋರಿ ಜಿಲ್ಲೆಯ ಸುಂದರಬನಿ ವಲಯದಲ್ಲಿ ಪಾಕಿಸ್ತಾನ ಸೇನೆ ಗುಂಡಿನ ದಾಳಿ ನಡೆಸಿದ್ದು, ಭಾರತ ಸಹ ಪ್ರತ್ಯುತ್ತರ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು ವಲಯದಲ್ಲಿ ಮೂರು ದಿನಗಳಲ್ಲಿ ಎರಡನೇ ಬಾರಿ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸ ಲಾಗಿದೆ. ನಾಗರಿಕರು ಹಾಗೂ ಭಾರತ ಸೇನೆ ಗುರಿಯಾಗಿಸಿಕೊಂಡು ಪಾಕಿಸ್ತಾನ ಸೇನೆಯು ಬೆಳಗಿನ ಸಮಯದಲ್ಲಿಯೇ ದಾಳಿ ಮಾಡುತ್ತಿದೆ ಎಂದು ಸೇನಾಪಡೆ ವಕ್ತಾರರು ಈ ಹಿಂದೆಯೇ ತಿಳಿಸಿದ್ದರು.