‘ಗಡಿ ದಾಟಿ ಬರಲು ಭಯಪಡುತ್ತಿದ್ದರು’
1971ರಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಭಾರತದ ಗೆಲುವಿಗೆ ಕಾರಣವಾದ ಶಸ್ತ್ರಪಡೆಗಳು ಹಾಗೂ ಅಂದು ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರ ಕೆಚ್ಚೆದೆಯ ನಾಯಕತ್ವವನ್ನು ಬುಧವಾರ ಶ್ಲಾಘಿಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ‘ನೆರೆ ರಾಷ್ಟ್ರಗಳು ಭಾರತದ ಪ್ರಧಾನಿಯ ಸಾಮರ್ಥ್ಯವನ್ನು ಗುರುತಿಸುವ ಕಾಲ ಅದಾಗಿತ್ತು ಹಾಗೂ ಗಡಿ ನಿಯಮ ಉಲ್ಲಂಘನೆ ಮಾಡಲು ನೆರೆರಾಷ್ಟ್ರಗಳು ಹೆದರುತ್ತಿದ್ದವು’ ಎಂದು ಹೇಳಿದ್ದಾರೆ.