<p><strong>ಬರಸಾತ್(ಪಶ್ಚಿಮ ಬಂಗಾಳ):</strong> ಟಿಎಂಸಿ ನಾಯಕ ಶಹಜಹಾನ್ ಶೇಖ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ಪಶ್ಚಿಮ ಬಂಗಾಳದ ಸಂದೇಶ್ಖಾಲಿಯ ಮಹಿಳೆಯರನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದಾರೆ.</p><p>ಉತ್ತರ 24 ಪರಗಣ ಜಿಲ್ಲೆಯ ಬರಸಾತ್ನಲ್ಲಿ ರ್ಯಾಲಿ ಸಂದರ್ಭ ಮೋದಿ, ಮಹಿಳೆಯರನ್ನು ಭೇಟಿ ಮಾಡಿದ್ದಾರೆ. ಸಂದೇಶ್ಖಾಲಿ ಸಹ ಇದೇ ಜಿಲ್ಲೆಯಲ್ಲಿದೆ.</p><p>'ಸಾರ್ವಜನಿಕ ಸಭೆ ಬಳಿಕ ಪ್ರಧಾನಿ ನರೇಂದ್ರ ಮೋದಿ, ಸಂದೇಶ್ಖಾಲಿಯಿಂದ ಬಂದಿದ್ದ ಕೆಲ ಮಹಿಳೆಯರನ್ನು ಭೇಟಿ ಮಾಡಿದರು. ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಮಹಿಳೆಯರು ಮೋದಿ ಬಳಿ ಹೇಳಿಕೊಂಡರು’ ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಗ್ನಿಮಿತ್ರ ಪೌಲ್ ಹೇಳಿದ್ದಾರೆ.</p><p>ತಮ್ಮ ಮೇಲಿನ ದೌರ್ಜನ್ಯದ ಕುರಿತಂತೆ ಪ್ರಧಾನಿಗೆ ವಿವರಿಸುವ ವೇಳೆ ಮಹಿಳೆಯರು ಭಾವುಕರಾದರು. ಒಬ್ಬ ತಂದೆ ರೀತಿ ಮೋದಿ ತಾಳ್ಮೆಯಿಂದ ಅವರ ನೋವನ್ನು ಆಲಿಸಿದರು ಎಂದು ಬಿಜೆಪಿ ಮೂಲಗಳು ತಿಳಿಸಿವೆ.</p><p>ಉತ್ತರ 24 ಪರಗಣ ಜಿಲ್ಲೆಯ ನದಿ ದ್ವೀಪ ಸಂದೇಶ್ಖಾಲಿ, ಟಿಎಂಸಿ ನಾಯಕ ಶಹಜಹಾನ್ ಶೇಖ್ ಅವರಿಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ರೈತರ ಭೂಮಿ ಅಕ್ರಮವಾಗಿ ವಶಪಡಿಸಿಕೊಂಡ ಆರೋಪಗಳ ಹಿನ್ನೆಲೆಯಲ್ಲಿ ಕುದಿಯುತ್ತಿದೆ.</p><p>ಫೆಬ್ರುವರಿ 29ರಂದು ಶಹಜಹಾನ್ ಅವರನ್ನು ಬಂಧಿಸಿರುವ ಪೊಲೀಸರು, ಕಲ್ಕತ್ತ ಹೈಕೋರ್ಟ್ ಆದೇಶದ ಬಳಿಕ ಮಂಗಳವಾರ ಸಿಬಿಐ ಕಸ್ಟಡಿಗೆ ಒಪ್ಪಿಸಿದ್ದಾರೆ.</p> .ಸಂದೇಶ್ಖಾಲಿ: ಸಿಬಿಐಗೆ ತನಿಖೆ ವರ್ಗಾಯಿಸಲು ಕಲ್ಕತ್ತ ಹೈಕೋರ್ಟ್ ಆದೇಶ .ಸಂದೇಶ್ಖಾಲಿ: ಶಹಜಹಾನ್ಗೆ ಸೇರಿದ ₹12 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.ಕೋಲ್ಕತ್ತ: ಸಂದೇಶ್ಖಾಲಿ; ಸಿಬಿಐಗೆ ಶಹಜಹಾನ್ ಒಪ್ಪಿಸಲು ಹೈಕೋರ್ಟ್ ಸೂಚನೆ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬರಸಾತ್(ಪಶ್ಚಿಮ ಬಂಗಾಳ):</strong> ಟಿಎಂಸಿ ನಾಯಕ ಶಹಜಹಾನ್ ಶೇಖ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ಪಶ್ಚಿಮ ಬಂಗಾಳದ ಸಂದೇಶ್ಖಾಲಿಯ ಮಹಿಳೆಯರನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದಾರೆ.</p><p>ಉತ್ತರ 24 ಪರಗಣ ಜಿಲ್ಲೆಯ ಬರಸಾತ್ನಲ್ಲಿ ರ್ಯಾಲಿ ಸಂದರ್ಭ ಮೋದಿ, ಮಹಿಳೆಯರನ್ನು ಭೇಟಿ ಮಾಡಿದ್ದಾರೆ. ಸಂದೇಶ್ಖಾಲಿ ಸಹ ಇದೇ ಜಿಲ್ಲೆಯಲ್ಲಿದೆ.</p><p>'ಸಾರ್ವಜನಿಕ ಸಭೆ ಬಳಿಕ ಪ್ರಧಾನಿ ನರೇಂದ್ರ ಮೋದಿ, ಸಂದೇಶ್ಖಾಲಿಯಿಂದ ಬಂದಿದ್ದ ಕೆಲ ಮಹಿಳೆಯರನ್ನು ಭೇಟಿ ಮಾಡಿದರು. ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಮಹಿಳೆಯರು ಮೋದಿ ಬಳಿ ಹೇಳಿಕೊಂಡರು’ ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಗ್ನಿಮಿತ್ರ ಪೌಲ್ ಹೇಳಿದ್ದಾರೆ.</p><p>ತಮ್ಮ ಮೇಲಿನ ದೌರ್ಜನ್ಯದ ಕುರಿತಂತೆ ಪ್ರಧಾನಿಗೆ ವಿವರಿಸುವ ವೇಳೆ ಮಹಿಳೆಯರು ಭಾವುಕರಾದರು. ಒಬ್ಬ ತಂದೆ ರೀತಿ ಮೋದಿ ತಾಳ್ಮೆಯಿಂದ ಅವರ ನೋವನ್ನು ಆಲಿಸಿದರು ಎಂದು ಬಿಜೆಪಿ ಮೂಲಗಳು ತಿಳಿಸಿವೆ.</p><p>ಉತ್ತರ 24 ಪರಗಣ ಜಿಲ್ಲೆಯ ನದಿ ದ್ವೀಪ ಸಂದೇಶ್ಖಾಲಿ, ಟಿಎಂಸಿ ನಾಯಕ ಶಹಜಹಾನ್ ಶೇಖ್ ಅವರಿಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ರೈತರ ಭೂಮಿ ಅಕ್ರಮವಾಗಿ ವಶಪಡಿಸಿಕೊಂಡ ಆರೋಪಗಳ ಹಿನ್ನೆಲೆಯಲ್ಲಿ ಕುದಿಯುತ್ತಿದೆ.</p><p>ಫೆಬ್ರುವರಿ 29ರಂದು ಶಹಜಹಾನ್ ಅವರನ್ನು ಬಂಧಿಸಿರುವ ಪೊಲೀಸರು, ಕಲ್ಕತ್ತ ಹೈಕೋರ್ಟ್ ಆದೇಶದ ಬಳಿಕ ಮಂಗಳವಾರ ಸಿಬಿಐ ಕಸ್ಟಡಿಗೆ ಒಪ್ಪಿಸಿದ್ದಾರೆ.</p> .ಸಂದೇಶ್ಖಾಲಿ: ಸಿಬಿಐಗೆ ತನಿಖೆ ವರ್ಗಾಯಿಸಲು ಕಲ್ಕತ್ತ ಹೈಕೋರ್ಟ್ ಆದೇಶ .ಸಂದೇಶ್ಖಾಲಿ: ಶಹಜಹಾನ್ಗೆ ಸೇರಿದ ₹12 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.ಕೋಲ್ಕತ್ತ: ಸಂದೇಶ್ಖಾಲಿ; ಸಿಬಿಐಗೆ ಶಹಜಹಾನ್ ಒಪ್ಪಿಸಲು ಹೈಕೋರ್ಟ್ ಸೂಚನೆ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>