ಆ ಕುರಿತು ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಜೈರಾಮ್ ರಮೇಶ್ ಅವರು, ‘ಭಾರತದ ಸಾರ್ವಭೌಮತ್ವವನ್ನು ಪದೇ ಪದೇ ಕೆಣಕುತ್ತಿರುವ ಚೀನಾಗೆ ಪ್ರಧಾನಿ ಪ್ರಬಲ ಸಂದೇಶ ಕೊಡಬಹುದಿತ್ತು. ಆದರೆ, ಅವರು ಎರಡು ದೇಶಗಳ ದ್ವಿಪಕ್ಷೀಯ ಸಂವಾದದಲ್ಲಿನ ಅಸಹಜತೆಯನ್ನು ಪರಿಹರಿಸಲು ಗಡಿ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಬೇಕಿದೆ ಎಂದಷ್ಟೇ ಹೇಳಿದ್ದಾರೆ’ ಎಂದು ತಿಳಿಸಿದ್ದಾರೆ.