ಇಂದ್ರಲೋಕ ಮೆಟ್ರೊ ನಿಲ್ದಾಣ ಬಳಿ ಮಧ್ಯಾಹ್ನ 2ರ ಹೊತ್ತಿಗೆ ಈ ಘಟನೆ ನಡೆದಿದೆ. ಮೆಟ್ರೊ ನಿಲ್ದಾಣ ಸಮೀಪದ ಮಸೀದಿ ಬಳಿಯ ರಸ್ತೆಯಲ್ಲಿ ಕೆಲವರು ನಮಾಜ್ ಮಾಡಲು ಮುಂದಾಗಿದ್ದಾಗ, ಅವರನ್ನು ಚದುರಿಸಲು ಮನೋಜ್ಕುಮಾರ್ ಯತ್ನಿಸಿದರು. ದಿಢೀರನೆ ಕೋಪಗೊಂಡಂತೆ ಕಂಡುಬಂದ ಅವರು ಕೆಲವರನ್ನು ಬಲವಾಗಿ ನೂಕಿ, ಒದೆಯುತ್ತಿರುವ ದೃಶ್ಯಗಳು ವಿಡಿಯೊದಲ್ಲಿವೆ.