‘ಚುನಾವಣಾ ಅಧಿಸೂಚನೆ ಬಿಡುಗಡೆಯ ಸಮಯ ಸನ್ನಿಹಿತವಾಗಿದ್ದು, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದರ ಕುರಿತು ಸೆಪ್ಟೆಂಬರ್ ತಿಂಗಳು ಮುಗಿಯುವ ವೇಳೆಗೆ ನಿರ್ಧಾರ ಮಾಡಲಾಗುವುದು. ಮೈತ್ರಿ ಫಲಿಸದಿದ್ದರೆ ಎಲ್ಲ 119 ಸ್ಥಾನಗಳಲ್ಲೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ. ಅಕ್ಟೋಬರ್ ಎರಡನೇ ವಾರದಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡುವುದಾಗಿ ಶರ್ಮಿಳಾ ಅವರು ಹೇಳಿದ್ದಾರೆ. ಪಕ್ಷದ ಕಾರ್ಯಕರ್ತರ ಶ್ರಮವನ್ನು ಗುರುತಿಸಿ, ಅವರ ಹಿತಾಸಕ್ತಿಯನ್ನು ರಕ್ಷಿಸಲಾಗುವುದೆಂದು ಶರ್ಮಿಳಾ ಭರವಸೆ ನೀಡಿದ್ದಾರೆ’ ಎಂದೂ ಅದು ಹೇಳಿದೆ.