‘ಮಂಡಿಯಲ್ಲಿ ಯಾಕೆ ಮಂದಿ ಇದೆ(ಬೇಡಿಕೆ ಕುಸಿತ) ಎಂದು ತಿಳಿಯಲು ಆಜಾದ್ಪುರ ಮಂಡಿಯಲ್ಲಿ ಕೂಲಿಗಳನ್ನು, ವರ್ತಕರನ್ನು ಹಾಗೂ ರೈತರನ್ನು ಮಾತನಾಡಿಸಿದೆ ಎಂದು ರಾಹುಲ್ ಗಾಂಧಿ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
’ಮಾರುಕಟ್ಟೆಯಲ್ಲಿ ಕೂಲಿಯಾಗಾಗಿ ದುಡಿಯುತ್ತಿರುವ ಜತಾ ಶಂಕರ್ ಅವರು ಒಂದು ವರ್ಷದಿಂದ ಮನೆಗೆ ಹೋಗಿಲ್ಲ. ಈ ಕೆಲಸದಿಂದಾಗಿ ಕುಟುಂಬವನ್ನೂ ಭೇಟಿ ಮಾಡಿಲ್ಲ. ಒಂದು ವೇಳೆ ಹೋದರೆ ಕೂಲಿ ಸಿಗುವುದಿಲ್ಲ. ಹಣದುಬ್ಬರದ ಈ ದಿನದಲ್ಲಿ ಬದುಕುವುದು ಕಷ್ಟ’ ಎಂದು ರಾಹುಲ್ ಬರೆದುಕೊಂಡಿದ್ದಾರೆ.
‘ನಷ್ಟದಿಂದಾಗಿ ವಾರಕ್ಕೆ ಎರಡು–ಮೂರು ರಾತ್ರಿ ಹಸಿವಿನಿಂದ ಮಲಗಬೇಕಾದ ಪರಿಸ್ಥಿತಿ ಇದೆ ಎಂದು ಅಂಗಡಿ ಮಾಲೀಕರೊಬ್ಬರು ಹೇಳಿದರು. ದೇಶದ ಬಡವರ ಸಮಸ್ಯೆಗಳನ್ನು ಪರಿಹರಿಸುವುದು ಬಿಡಿ, ಆಲಿಸುತ್ತಲೂ ಇಲ್ಲ’ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಸಮಯ ಬದಲಾಗಲಿದೆ. ಭಾರತ ಒಂದಾಗಲಿದೆ. ಬಡವರ ಕಣ್ಣೀರು ಬರೆಸಲಾಗುವುದು ಎಂದು ಅವರು ಬರೆದುಕೊಂಡಿದ್ದಾರೆ.