ಕೇದಾರನಾಥ, ಬದರೀನಾಥ, ಯಮುನೋತ್ರಿ, ಗಂಗೋತ್ರಿ ದೇಗುಲಗಳಿಗೆ ತೀರ್ಥಯಾತ್ರೆ ಹೋಗುವವರು 5ಜಿ ಬಳಕೆದಾರರಾಗಿದ್ದಲ್ಲಿ ಅವರು ತಡೆರಹಿತ 5ಜಿ ಸೇವೆ ಸಿಗಲಿದೆ ಎಂದು ರಿಲಯನ್ಸ್ ಜಿಯೊ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಟೆಲಿಕಾಂ ಸೇವೆಗೆ ಬದಿರೀನಾಥ–ಕೇದಾರನಾಥ ದೇಗುಲಗಳ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ಅವರು ಚಾಲನೆ ನೀಡಿದರು.
ಈ ವೇಳೆ ಹಾಜರಿದ್ದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಾತನಾಡಿ, ‘ಡಿಜಿಟಲ್ ಕ್ಷೇತ್ರದಲ್ಲಿ ಬದಲಾವಣೆ ತಂದ ರಿಲಯನ್ಸ್ ಜಿಯೊಗೆ ಧನ್ಯವಾದ‘ ಎಂದರು.