ರಾಮೇಶ್ವರಂ: ಸಮುದ್ರದ ಗಡಿ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಆರು ಮಂದಿ ಭಾರತೀಯ ಮೀನುಗಾರರನ್ನು ಶ್ರೀಲಂಕಾದ ನೌಕಾಪಡೆ ಬಂಧಿಸಿದೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರನ್ನು ಶ್ರೀಲಂಕಾದ ತಲೈಮನ್ನಾರ್ಗೆ ಕರೆದೊಯ್ಯಲಾಗಿದೆ.
ಆರು ಮಂದಿ ಮೀನುಗಾರರು ಮೀನುಗಾರಿಕೆಗೆಂದು ಬುಧವಾರ ಸಮುದ್ರಕ್ಕೆ ಇಳಿದಿದ್ದರು. ಪಾಲ್ಕ್ ಜಲಸಂಧಿಯಲ್ಲಿ ಮೀನು ಹಿಡಿಯುವ ವೇಳೆ, ಗಡಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಮೀನುಗಾರರನ್ನು ಬಂಧಿಸಲಾಗಿದೆ.