<p><strong>ಜೈಪುರ:</strong> ಗೋವು ಕಳ್ಳಸಾಗಣೆ ಮಾಡುವವರು ಸಿಕ್ಕಿದರೆ ಅವರಿಗೆ ಥಳಿಸಿಮರಕ್ಕೆ ಕಟ್ಟಿ ಹಾಕಿದ ನಂತರ ಪೊಲೀಸರಿಗೆ ಮಾಹಿತಿ ನೀಡಿ ಎಂದು ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ಹೇಳಿದ್ದಾರೆ.<br />ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಇವರು ಕಳ್ಳ ಸಾಗಣೆ ಮಾಡುವ ವ್ಯಕ್ತಿಗಳು ಸಿಕ್ಕರೆ ನಾಲ್ಕೈದು ಬಾರಿ ಕಪಾಳಕ್ಕೆ ಹೊಡೆಯಿರಿ.ಗುದ್ದು ನೀಡಿ ಆಮೇಲೆ ಮರಕ್ಕೆ ಕಟ್ಟಿ ಹಾಕಿ, ನಂತರ ಪೊಲೀಸರಿಗೆ ಮಾಹಿತಿ ನೀಡಿ ಎಂದಿದ್ದಾರೆ.</p>.<p>ಈ ಬಗ್ಗೆ ಸೋಮವಾರ ದಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅಹುಜಾ, ಜನರು ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಈ ರೀತಿ ಹೇಳಿದ್ದೇನೆ ಎಂದಿದ್ದಾರೆ.</p>.<p>ಗೋವು ಕಳ್ಳಸಾಗಣೆ ಮಾಡುವವರ ಮೇಲೆ ತೀವ್ರ ಹಲ್ಲೆ ಮಾಡಬೇಡಿ. ಇದರ ಬದಲು ನಾಲ್ಕೈದು ಬಾರಿ ಕಪಾಳಕ್ಕೆ ಹೊಡೆದು, ಅವರು ಅಲ್ಲಿಂದ ತಪ್ಪಿಸಿಕೊಳ್ಳದಂತೆ ಮರಕ್ಕೆ ಕಟ್ಟಿಹಾಕಿ.ಪೊಲೀಸರಿಗೆ ತಿಳಿಸಿದರೆ ಅವರುಬಂಧಿಸಿ, ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ.ಯಾರೊಬ್ಬರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದಿದ್ದಾರೆ.</p>.<p>ರಾಜಸ್ಥಾನದ ಅಲ್ವಾರ್ನಲ್ಲಿ ರಖ್ಬರ್ ಖಾನ್ ಅಲಿಯಾಲ್ ಅಕ್ಬರ್ ಎಂಬ ವ್ಯಕ್ತಿ ಅಕ್ರಮವಾಗಿ ಗೋವು ಸಾಗಣೆ ಮಾಡುತ್ತಿದ್ದರೆಂದು ಶಂಕಿಸಿ ಗೋರಕ್ಷಕರ ಗುಂಪೊಂದು ಜುಲೈ 20ರಂದು ಹೊಡೆದು ಸಾಯಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ ಮೂವರು ವ್ಯಕ್ತಿಗಳು ನಿರಪರಾಧಿಗಳಾಗಿದ್ದಾರೆ. ಪೊಲೀಸರೇ ಆ ವ್ಯಕ್ತಿಗಳ ಮೇಲೆ ಈ ರೀತಿ ಸುಳ್ಳು ಆರೋಪ ಹೊರಿಸಿದ್ದಾರೆ ಎಂದಿದ್ದಾರೆ ಅಹುಜಾ,.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೈಪುರ:</strong> ಗೋವು ಕಳ್ಳಸಾಗಣೆ ಮಾಡುವವರು ಸಿಕ್ಕಿದರೆ ಅವರಿಗೆ ಥಳಿಸಿಮರಕ್ಕೆ ಕಟ್ಟಿ ಹಾಕಿದ ನಂತರ ಪೊಲೀಸರಿಗೆ ಮಾಹಿತಿ ನೀಡಿ ಎಂದು ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ಹೇಳಿದ್ದಾರೆ.<br />ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಇವರು ಕಳ್ಳ ಸಾಗಣೆ ಮಾಡುವ ವ್ಯಕ್ತಿಗಳು ಸಿಕ್ಕರೆ ನಾಲ್ಕೈದು ಬಾರಿ ಕಪಾಳಕ್ಕೆ ಹೊಡೆಯಿರಿ.ಗುದ್ದು ನೀಡಿ ಆಮೇಲೆ ಮರಕ್ಕೆ ಕಟ್ಟಿ ಹಾಕಿ, ನಂತರ ಪೊಲೀಸರಿಗೆ ಮಾಹಿತಿ ನೀಡಿ ಎಂದಿದ್ದಾರೆ.</p>.<p>ಈ ಬಗ್ಗೆ ಸೋಮವಾರ ದಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅಹುಜಾ, ಜನರು ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಈ ರೀತಿ ಹೇಳಿದ್ದೇನೆ ಎಂದಿದ್ದಾರೆ.</p>.<p>ಗೋವು ಕಳ್ಳಸಾಗಣೆ ಮಾಡುವವರ ಮೇಲೆ ತೀವ್ರ ಹಲ್ಲೆ ಮಾಡಬೇಡಿ. ಇದರ ಬದಲು ನಾಲ್ಕೈದು ಬಾರಿ ಕಪಾಳಕ್ಕೆ ಹೊಡೆದು, ಅವರು ಅಲ್ಲಿಂದ ತಪ್ಪಿಸಿಕೊಳ್ಳದಂತೆ ಮರಕ್ಕೆ ಕಟ್ಟಿಹಾಕಿ.ಪೊಲೀಸರಿಗೆ ತಿಳಿಸಿದರೆ ಅವರುಬಂಧಿಸಿ, ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ.ಯಾರೊಬ್ಬರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದಿದ್ದಾರೆ.</p>.<p>ರಾಜಸ್ಥಾನದ ಅಲ್ವಾರ್ನಲ್ಲಿ ರಖ್ಬರ್ ಖಾನ್ ಅಲಿಯಾಲ್ ಅಕ್ಬರ್ ಎಂಬ ವ್ಯಕ್ತಿ ಅಕ್ರಮವಾಗಿ ಗೋವು ಸಾಗಣೆ ಮಾಡುತ್ತಿದ್ದರೆಂದು ಶಂಕಿಸಿ ಗೋರಕ್ಷಕರ ಗುಂಪೊಂದು ಜುಲೈ 20ರಂದು ಹೊಡೆದು ಸಾಯಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ ಮೂವರು ವ್ಯಕ್ತಿಗಳು ನಿರಪರಾಧಿಗಳಾಗಿದ್ದಾರೆ. ಪೊಲೀಸರೇ ಆ ವ್ಯಕ್ತಿಗಳ ಮೇಲೆ ಈ ರೀತಿ ಸುಳ್ಳು ಆರೋಪ ಹೊರಿಸಿದ್ದಾರೆ ಎಂದಿದ್ದಾರೆ ಅಹುಜಾ,.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>