ಶ್ರೀನಗರ: ಯುವಕರ ಗುಂಪೊಂದು ನಡೆಸಿದ ಕಲ್ಲು ತೂರಾಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯೋಧ ಶುಕ್ರವಾರ ಸಾವನ್ನಪ್ಪಿದ್ದಾನೆ.
ಗಡಿ ರಸ್ತೆಗಳ ಸಂಸ್ಥೆಗೆ ಭದ್ರತೆ ನೀಡುವ ಕ್ಷಿಪ್ರ ಪ್ರತಿಸ್ಪಂದನಾ ತಂಡದಲ್ಲಿದ್ದ ಸಿಪಾಯಿ ರಾಜೇಂದ್ರ ಸಿಂಗ್ ತಲೆಗೆ ಕಲ್ಲು ತಗುಲಿ ಪೆಟ್ಟು ಬಿದ್ದಿತ್ತು. ತಕ್ಷಣ ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಎರಡು ವರ್ಷಗಳ ಹಿಂದೆಯಷ್ಟೇ ಸೇನೆ ಸೇರಿದ್ದ ಉತ್ತರಾಖಂಡದ ಸಿಂಗ್, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು. ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಇನ್ನಿಬ್ಬರು ಯೋಧರು ಶುಕ್ರವಾರ ಹುತಾತ್ಮರಾಗಿದ್ದಾರೆ.