ರಾಣಿ ಅಮರ್ದೀಪ್ ಧನ್ವಿಜಯ್ ಎಂಬುವರು ಐಟಿಐ ಕಾಲೇಜಿನ ಆವರಣದಲ್ಲೇ ಮಾರ್ಚ್ 6ರಂದು ವಿಷಸೇವಿಸಿ, ಪ್ರಜ್ಞಾಹೀನರಾಗಿ ಬಿದ್ದಿದ್ದರು. ಅವರನ್ನು ವಿದ್ಯಾರ್ಥಿಗಳೇ ಆಸ್ಪತ್ರೆಗೆ ದಾಖಲಿಸಿದ್ದರು. ರಾಣಿ ಅಮರ್ದೀಪ್ ಅವರು ಶನಿವಾರ ರಾತ್ರಿ ಸಾವಿಗೀಡಾಗಿದ್ದು, ಅವರದ್ದು ಆಕಸ್ಮಿಕ ಸಾವು ಎಂದು ಇಲ್ಲಿನ ಧಾಂತೋಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.