ನವದೆಹಲಿ: ವಿವಿಧ ಪ್ರಕರಣಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ ಆವರಣದಲ್ಲಿ ಓಡಾಡಿದರು. ನ್ಯಾಯಾಲಯ ಪ್ರವೇಶಿಸುವ ಸಲುವಾಗಿ ಅಳವಡಿಸಿರುವ ಎಲೆಕ್ಟ್ರಾನಿಕ್ ಪಾಸ್ ವ್ಯವಸ್ಥೆ ವೀಕ್ಷಿಸಿದರು. ನಂತರ ಇತರ ನ್ಯಾಯಮೂರ್ತಿಗಳೊಂದಿಗೆ ಕೆಫೆಟೇರಿಯಾದಲ್ಲಿ ಸಮೋಸಾ ಸವಿದರು.
ದಿಢೀರ್ ಎಂದು ಹೊರಟ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿದರು. ಅವರೊಂದಿಗೆ ನ್ಯಾಯಮೂರ್ತಿ ಹೃಷಿಕೇಶ್ ರಾಯ್, ನ್ಯಾ. ಪಿ.ಎಸ್.ನರಸಿಂಹ, ನ್ಯಾ. ಪಿ.ಎಸ್.ನರಸಿಂಹ, ನ್ಯಾ. ಪಂಕಜ್ ಮಿತ್ತಲ್ ಹಾಗೂ ನ್ಯಾ. ಮನೋಜ್ ಮಿಶ್ರಾ ಅವರೂ ಜತೆಗೂಡಿದರು.