ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳಲ್ಲಿ ಆಯೋಗವು ನಿರ್ಧಾರ ಕೈಗೊಂಡಿದೆ. ಇದು ಸರಿಯೇ ತಪ್ಪೇ ಎಂಬುದು ಬೇರೆ ವಿಚಾರ. ಹಾಗಾಗಿ ಹೊಸ ದೂರು ಸಲ್ಲಿಸುವ ಸಾಧ್ಯತೆ ಮುಕ್ತವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ಹೇಳಿತು.ಮೋದಿ ಮತ್ತು ಶಾ ವಿರುದ್ಧದ ದೂರುಗಳ ಬಗ್ಗೆ ಆಯೋಗವು ನಿರ್ಧಾರ ಕೈಗೊಳ್ಳದಿರುವುದನ್ನು ಪ್ರಶ್ನಿಸಿ ಸುಶ್ಮಿತಾ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.