ಇಲ್ಲಿನ ಕತುವಾ ಜಿಲ್ಲೆಯಲ್ಲಿ ಮಂಗಳವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಂತಿಯ ಶತ್ರುಗಳು ಇಂತಹ ಹೇಡಿತನದ ಕೃತ್ಯ ಎಸಗುತ್ತಿದ್ದಾರೆ. ಉಗ್ರರ ದುಷ್ಕೃತ್ಯದ ಯತ್ನವನ್ನು ನಾವು ಈಗಾಗಲೇ ವಿಫಲಗೊಳಿಸಿದ್ದೇವೆ. ಮುನ್ನೆಲೆಗೆ ಬರಲು ಯತ್ನಿಸುವ ಯಾವುದೇ ಹೊಸ ಭಯೋತ್ಪಾದಕ ಸಂಘಟನೆಯನ್ನು ತಟಸ್ಥಗೊಳಿಸಿದ್ದೇವೆ. ಕಣಿವೆಯಲ್ಲಿ ಮಾದಕದ್ರವ್ಯ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯನ್ನು ಸಂಪೂರ್ಣವಾಗಿ ತಡೆಯುವ ಸಲುವಾಗಿ ಭದ್ರತೆಯನ್ನು ಬಲಪಡಿಸಿದ್ದು, ಪಾಕಿಸ್ತಾನದ ಗಡಿಯಲ್ಲಿ ತೀವ್ರ ನಿಗಾ ವಹಿಸಲಾಗಿದೆ’ ಎಂದು ಹೇಳಿದರು.