ನವದೆಹಲಿ: ಭೂಕಂಪ ಪೀಡಿತ ಟರ್ಕಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ‘ಆಪರೇಷನ್ ದೋಸ್ತ್’ಅಡಿಯಲ್ಲಿ ಕಳುಹಿಸಿರುವ ಭಾರತೀಯ ಸೇನಾ ತಂಡಗಳು ಹಗಲಿರುಳು ಶ್ರಮಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
‘ಗರಿಷ್ಠ ಜೀವಗಳು ಮತ್ತು ಆಸ್ತಿಯನ್ನು ಉಳಿಸಲು ನಮ್ಮ ಸೇನಾ ತಂಡಗಳು ಶಕ್ತಿ ಮೀರಿ ಯತ್ನಿಸುತ್ತಿವೆ. ಈ ನಿರ್ಣಾಯಕ ಸಮಯದಲ್ಲಿ, ಭಾರತವು ಟರ್ಕಿಯ ಜನರೊಂದಿಗೆ ದೃಢವಾಗಿ ನಿಂತಿದೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಭಾರತೀಯ ತಂಡಗಳು ಟರ್ಕಿಯಲ್ಲಿ ಮಾಡುತ್ತಿರುವ ಸಹಾಯದ ದೃಶ್ಯಗಳನ್ನು ವಿದೇಶಾಂಗ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದರು. ಮೋದಿ ಆ ಟ್ವೀಟ್ ಹಂಚಿಕೊಂಡಿದ್ದಾರೆ.
Our teams are working day and night as a part of ‘Operation Dost.’ They will keep giving their best to ensure maximum lives and property are saved. In this critical time, India stands firmly with the people of Türkiye. https://t.co/FJT9ve4TYj