<p><strong>ಗಡ್ಚಿರೋಲಿ:</strong> ತಮ್ಮ ತಲೆಗೆ ಒಟ್ಟು ₹16 ಲಕ್ಷ ಬಹುಮಾನ ಘೋಷಣೆಯಾಗಿದ್ದ ಇಬ್ಬರು ಮಹಿಳಾ ನಕ್ಸಲರು ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p><p>ಶರಣಾದ ನಕ್ಸಲರನ್ನು ಬಾಲಿ ಅಲಿಯಾಸ್ ರಾಮಬಟ್ಟಿ ಅಲಿಯಾಸ್ ಝರೀನಾ ನರೋಟೆ(28), ಶಶಿಕಲಾ ಅಲಿಯಾಸ್ ಚಂದ್ರಕಲಾ ಅಲಿಯಾಸ್ ಮನಿಶಾ ಉಯಿಕೆ(29) ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p><p>ಶರಣಾದ ಇಬ್ಬರು ಸಹ ಸಿಪಿಐ(ಮಾವೋವಾದಿ) ಸಂಘಟನೆಗೆ ಸೇರಿದವರು. ಇಬ್ಬರ ತಲೆಗೆ ತಲಾ ₹8 ಲಕ್ಷ ಬಹುಮಾನ ಘೋಷಿಸಲಾಗಿತ್ತು.</p><p>ಜಿಲ್ಲೆಯ ಕುಖ್ಯಾತ ನಕ್ಸಲ್ ಗಿರಿಧರ್ ಮತ್ತು ಅವರ ಪತ್ನಿ ಸಂಗೀತಾ ಉಸೆಂಡಿ ಪೊಲೀಸರಿಗೆ ಶರಣಾದ ಒಂದು ವಾರದ ಬೆನ್ನಲ್ಲೇ ಮತ್ತಿಬ್ಬರು ನಕ್ಸಲರು ಶರಣಾಗಿದ್ದಾರೆ.</p><p>‘ಒಂದು ಬೆಂಕಿ ಹಚ್ಚಿದ್ದ ಪ್ರಕರಣ, ಮತ್ತೊಂದು ಅಪಹರಣ ಪ್ರಕರಣ ಮತ್ತು 9 ಇತರೆ ಅಪರಾಧ ಪ್ರಕರಣಗಳು ಸೇರಿ ನರೋಟೆ ವಿರುದ್ಧ ಒಟ್ಟು 21 ಪ್ರಕರಣಗಳಿದ್ದರೆ, ಉಯಿಕೆ ವಿರುದ್ಧ 8 ಪ್ರಕರಣಗಳಿವೆ. ಇದರಲ್ಲಿ 6 ಎನ್ಕೌಂಟರ್ಗೆ ಸಂಬಂಧಿಸಿದ್ದವುಗಳಾಗಿವೆ’ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>2005ರಿಂದ ಜಾರಿಯಲ್ಲಿರುವ ಶರಣಾಗತಿ ಮತ್ತು ಪುನರ್ವಸತಿ ನೀತಿ ಅನ್ವಯ ಇಬ್ಬರಿಗೂ ತಲಾ ₹5 ಲಕ್ಷ ಸಿಗಲಿದೆ. ಹಿಂಸಾಚಾರ ಬಿಟ್ಟು ಶರಣಾಗುವ ಎಲ್ಲರಿಗೂ ನೆರವು ಸಿಗಲಿದೆ ಎಂದೂ ಎಸ್ಪಿ ತಿಳಿಸಿದ್ದಾರೆ.</p><p>ನಕ್ಸಲ್ ನಿಗ್ರಹ ಕಾರ್ಯಾಚರಣೆ ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ 2022ರಲ್ಲಿ 19 ಮಂದಿ ಕುಖ್ಯಾತ ನಕ್ಸಲರು ಶರಣಾಗಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಡ್ಚಿರೋಲಿ:</strong> ತಮ್ಮ ತಲೆಗೆ ಒಟ್ಟು ₹16 ಲಕ್ಷ ಬಹುಮಾನ ಘೋಷಣೆಯಾಗಿದ್ದ ಇಬ್ಬರು ಮಹಿಳಾ ನಕ್ಸಲರು ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p><p>ಶರಣಾದ ನಕ್ಸಲರನ್ನು ಬಾಲಿ ಅಲಿಯಾಸ್ ರಾಮಬಟ್ಟಿ ಅಲಿಯಾಸ್ ಝರೀನಾ ನರೋಟೆ(28), ಶಶಿಕಲಾ ಅಲಿಯಾಸ್ ಚಂದ್ರಕಲಾ ಅಲಿಯಾಸ್ ಮನಿಶಾ ಉಯಿಕೆ(29) ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p><p>ಶರಣಾದ ಇಬ್ಬರು ಸಹ ಸಿಪಿಐ(ಮಾವೋವಾದಿ) ಸಂಘಟನೆಗೆ ಸೇರಿದವರು. ಇಬ್ಬರ ತಲೆಗೆ ತಲಾ ₹8 ಲಕ್ಷ ಬಹುಮಾನ ಘೋಷಿಸಲಾಗಿತ್ತು.</p><p>ಜಿಲ್ಲೆಯ ಕುಖ್ಯಾತ ನಕ್ಸಲ್ ಗಿರಿಧರ್ ಮತ್ತು ಅವರ ಪತ್ನಿ ಸಂಗೀತಾ ಉಸೆಂಡಿ ಪೊಲೀಸರಿಗೆ ಶರಣಾದ ಒಂದು ವಾರದ ಬೆನ್ನಲ್ಲೇ ಮತ್ತಿಬ್ಬರು ನಕ್ಸಲರು ಶರಣಾಗಿದ್ದಾರೆ.</p><p>‘ಒಂದು ಬೆಂಕಿ ಹಚ್ಚಿದ್ದ ಪ್ರಕರಣ, ಮತ್ತೊಂದು ಅಪಹರಣ ಪ್ರಕರಣ ಮತ್ತು 9 ಇತರೆ ಅಪರಾಧ ಪ್ರಕರಣಗಳು ಸೇರಿ ನರೋಟೆ ವಿರುದ್ಧ ಒಟ್ಟು 21 ಪ್ರಕರಣಗಳಿದ್ದರೆ, ಉಯಿಕೆ ವಿರುದ್ಧ 8 ಪ್ರಕರಣಗಳಿವೆ. ಇದರಲ್ಲಿ 6 ಎನ್ಕೌಂಟರ್ಗೆ ಸಂಬಂಧಿಸಿದ್ದವುಗಳಾಗಿವೆ’ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>2005ರಿಂದ ಜಾರಿಯಲ್ಲಿರುವ ಶರಣಾಗತಿ ಮತ್ತು ಪುನರ್ವಸತಿ ನೀತಿ ಅನ್ವಯ ಇಬ್ಬರಿಗೂ ತಲಾ ₹5 ಲಕ್ಷ ಸಿಗಲಿದೆ. ಹಿಂಸಾಚಾರ ಬಿಟ್ಟು ಶರಣಾಗುವ ಎಲ್ಲರಿಗೂ ನೆರವು ಸಿಗಲಿದೆ ಎಂದೂ ಎಸ್ಪಿ ತಿಳಿಸಿದ್ದಾರೆ.</p><p>ನಕ್ಸಲ್ ನಿಗ್ರಹ ಕಾರ್ಯಾಚರಣೆ ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ 2022ರಲ್ಲಿ 19 ಮಂದಿ ಕುಖ್ಯಾತ ನಕ್ಸಲರು ಶರಣಾಗಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>