<p><strong>ಗಾಂಧಿನಗರ:</strong> ’ಸೂರತ್ನಲ್ಲಿ ಬೆಂಕಿ ದುರಂತ ಸಂಭವಿಸಿದ ಕೋಚಿಂಗ್ ಸೆಂಟರ್ನಲ್ಲಿ ಟೈರ್ಗಳನ್ನು ಕುರ್ಚಿ ರೀತಿ ಬಳಸಲಾಗಿತ್ತು. ಇದರಿಂದಾಗಿ ಬೆಂಕಿ ಜ್ವಾಲೆಗಳು ಅತಿ ವೇಗದಲ್ಲಿ ವ್ಯಾಪಿಸಿ ದೊಡ್ಡ ಅವಘಡಕ್ಕೆ ಕಾರಣವಾಯಿತು’ ಎಂದು ಗುಜರಾತ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೆ.ಎನ್. ಸಿಂಗ್ ತಿಳಿಸಿದ್ದಾರೆ.</p>.<p>‘ಕಟ್ಟಡದಲ್ಲಿ ಫ್ಲೆಕ್ಸ್, ಟೈರ್ಗಳು ಸೇರಿದಂತೆ ಶೀಘ್ರ ದಹನವಾಗುವ ವಸ್ತುಗಳಿದ್ದವು. ಜತೆಗೆ, ಅಗ್ನಿಶಾಮಕ ವಾಹನಗಳು ದೂರವಿದ್ದವು. ಇದರಿಂದ ರಕ್ಷಣಾ ಕಾರ್ಯ ವಿಳಂಬವಾಯಿತು’ ಎಂದು ತಿಳಿಸಿದ್ದಾರೆ.</p>.<p>‘ಬೆಂಕಿಯು ಅತಿ ವೇಗದಲ್ಲಿ ಹಬ್ಬಿದೆ. ಕೋಚಿಂಗ್ ಸೆಂಟರ್ನ ಛಾವಣಿ ಕೇವಲ ಐದು ಅಡಿ ಎತ್ತರದಲ್ಲಿತ್ತು. ಇಂತಹ ಕೊಠಡಿಯಲ್ಲಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅಸಾಧ್ಯವಾಗುವುದರಿಂದ ಕೋಚಿಂಗ್ ಸೆಂಟರ್ನ ಮಾಲೀಕ ಟೈರ್ಗಳನ್ನು ಬಳಸಿದ್ದ’ ಎಂದು ತಿಳಿಸಿದ್ದಾರೆ.</p>.<p>‘ಅತಿ ಹೆಚ್ಚಿನ ಸಾಮರ್ಥ್ಯದ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಲು ಸಾಧ್ಯವಾಗಲಿಲ್ಲ. ಅವೆಲ್ಲವು ದೂರದಲ್ಲಿದ್ದವು. ಬೆಂಕಿ ದುರಂತದ ಸ್ಥಳಕ್ಕೆ ಆಗಮಿಸಲು ಸುಮಾರು 45 ನಿಮಿಷ ತೆಗೆದುಕೊಂಡವು. ಈ ಅವಧಿಯಲ್ಲಿ ಹಲವು ವಿದ್ಯಾರ್ಥಿಗಳು ಜೀವ ಕಳೆದುಕೊಂಡರು’ ಎಂದು ವಿವರಿಸಿದ್ದಾರೆ.</p>.<p>‘ಕರ್ತವ್ಯ ನಿರ್ಲಕ್ಷ್ಯದ ಕಾರಣಕ್ಕೆ ಸೂರತ್ ಅಗ್ನಿಶಾಮಕ ದಳದ ಇಬ್ಬರು ಅಧಿಕಾರಿಗಳಾದ ಎಸ್.ಕೆ. ಆಚಾರ್ಯ ಮತ್ತು ಕೀರ್ತಿ ಮೊದ್ ಅವರನ್ನು ಅಮಾನತುಗೊಳಿಸಲಾಗಿದೆ’ ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.</p>.<p>ಬೆಂಕಿ ದುರಂತದ ಹಿನ್ನೆಲೆಯಲ್ಲಿ ಎಲ್ಲ ಕಟ್ಟಡಗಳಲ್ಲಿ ಸುರಕ್ಷತಾ ಕ್ರಮಗಳ ತಪಾಸಣೆಯನ್ನು ಎಲ್ಲ ಮುನ್ಸಿಪಾಲಿಟಿಗಳು ಮತ್ತು ನಗರ ಪಾಲಿಕೆಗಳು ಕೈಗೊಂಡಿವೆ. ತಪಾಸಣೆಗಾಗಿಯೇ 713 ತಂಡಗಳನ್ನು ರಚಿಸಲಾಗಿದೆ.</p>.<p>ಈಗಾಗಲೇ ಕೋಚಿಂಗ್ ಸೆಂಟರ್ ನಡೆಸುತ್ತಿದ್ದ ಸುಮಾರು 9,900 ಕಟ್ಟಡಗಳನ್ನು ಪರಿಶೀಲಿಸಲಾಗಿದ್ದು, 9,300 ಮಂದಿಗೆ ನೋಟಿಸ್ ಜಾರಿಗೊಳಿಸಲಾಗಿದೆ.</p>.<p>ಕಟ್ಟಡಗಳಲ್ಲಿ ಶೀಘ್ರದಲ್ಲೇ ಅಗ್ನಿಶಾಮಕ ವ್ಯವಸ್ಥೆಯನ್ನು ಅಳವಡಿಸದಿದ್ದರೆ ಬೀಗ ಹಾಕಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಾಂಧಿನಗರ:</strong> ’ಸೂರತ್ನಲ್ಲಿ ಬೆಂಕಿ ದುರಂತ ಸಂಭವಿಸಿದ ಕೋಚಿಂಗ್ ಸೆಂಟರ್ನಲ್ಲಿ ಟೈರ್ಗಳನ್ನು ಕುರ್ಚಿ ರೀತಿ ಬಳಸಲಾಗಿತ್ತು. ಇದರಿಂದಾಗಿ ಬೆಂಕಿ ಜ್ವಾಲೆಗಳು ಅತಿ ವೇಗದಲ್ಲಿ ವ್ಯಾಪಿಸಿ ದೊಡ್ಡ ಅವಘಡಕ್ಕೆ ಕಾರಣವಾಯಿತು’ ಎಂದು ಗುಜರಾತ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೆ.ಎನ್. ಸಿಂಗ್ ತಿಳಿಸಿದ್ದಾರೆ.</p>.<p>‘ಕಟ್ಟಡದಲ್ಲಿ ಫ್ಲೆಕ್ಸ್, ಟೈರ್ಗಳು ಸೇರಿದಂತೆ ಶೀಘ್ರ ದಹನವಾಗುವ ವಸ್ತುಗಳಿದ್ದವು. ಜತೆಗೆ, ಅಗ್ನಿಶಾಮಕ ವಾಹನಗಳು ದೂರವಿದ್ದವು. ಇದರಿಂದ ರಕ್ಷಣಾ ಕಾರ್ಯ ವಿಳಂಬವಾಯಿತು’ ಎಂದು ತಿಳಿಸಿದ್ದಾರೆ.</p>.<p>‘ಬೆಂಕಿಯು ಅತಿ ವೇಗದಲ್ಲಿ ಹಬ್ಬಿದೆ. ಕೋಚಿಂಗ್ ಸೆಂಟರ್ನ ಛಾವಣಿ ಕೇವಲ ಐದು ಅಡಿ ಎತ್ತರದಲ್ಲಿತ್ತು. ಇಂತಹ ಕೊಠಡಿಯಲ್ಲಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅಸಾಧ್ಯವಾಗುವುದರಿಂದ ಕೋಚಿಂಗ್ ಸೆಂಟರ್ನ ಮಾಲೀಕ ಟೈರ್ಗಳನ್ನು ಬಳಸಿದ್ದ’ ಎಂದು ತಿಳಿಸಿದ್ದಾರೆ.</p>.<p>‘ಅತಿ ಹೆಚ್ಚಿನ ಸಾಮರ್ಥ್ಯದ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಲು ಸಾಧ್ಯವಾಗಲಿಲ್ಲ. ಅವೆಲ್ಲವು ದೂರದಲ್ಲಿದ್ದವು. ಬೆಂಕಿ ದುರಂತದ ಸ್ಥಳಕ್ಕೆ ಆಗಮಿಸಲು ಸುಮಾರು 45 ನಿಮಿಷ ತೆಗೆದುಕೊಂಡವು. ಈ ಅವಧಿಯಲ್ಲಿ ಹಲವು ವಿದ್ಯಾರ್ಥಿಗಳು ಜೀವ ಕಳೆದುಕೊಂಡರು’ ಎಂದು ವಿವರಿಸಿದ್ದಾರೆ.</p>.<p>‘ಕರ್ತವ್ಯ ನಿರ್ಲಕ್ಷ್ಯದ ಕಾರಣಕ್ಕೆ ಸೂರತ್ ಅಗ್ನಿಶಾಮಕ ದಳದ ಇಬ್ಬರು ಅಧಿಕಾರಿಗಳಾದ ಎಸ್.ಕೆ. ಆಚಾರ್ಯ ಮತ್ತು ಕೀರ್ತಿ ಮೊದ್ ಅವರನ್ನು ಅಮಾನತುಗೊಳಿಸಲಾಗಿದೆ’ ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.</p>.<p>ಬೆಂಕಿ ದುರಂತದ ಹಿನ್ನೆಲೆಯಲ್ಲಿ ಎಲ್ಲ ಕಟ್ಟಡಗಳಲ್ಲಿ ಸುರಕ್ಷತಾ ಕ್ರಮಗಳ ತಪಾಸಣೆಯನ್ನು ಎಲ್ಲ ಮುನ್ಸಿಪಾಲಿಟಿಗಳು ಮತ್ತು ನಗರ ಪಾಲಿಕೆಗಳು ಕೈಗೊಂಡಿವೆ. ತಪಾಸಣೆಗಾಗಿಯೇ 713 ತಂಡಗಳನ್ನು ರಚಿಸಲಾಗಿದೆ.</p>.<p>ಈಗಾಗಲೇ ಕೋಚಿಂಗ್ ಸೆಂಟರ್ ನಡೆಸುತ್ತಿದ್ದ ಸುಮಾರು 9,900 ಕಟ್ಟಡಗಳನ್ನು ಪರಿಶೀಲಿಸಲಾಗಿದ್ದು, 9,300 ಮಂದಿಗೆ ನೋಟಿಸ್ ಜಾರಿಗೊಳಿಸಲಾಗಿದೆ.</p>.<p>ಕಟ್ಟಡಗಳಲ್ಲಿ ಶೀಘ್ರದಲ್ಲೇ ಅಗ್ನಿಶಾಮಕ ವ್ಯವಸ್ಥೆಯನ್ನು ಅಳವಡಿಸದಿದ್ದರೆ ಬೀಗ ಹಾಕಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>