ಭಾರತದಲ್ಲಿ ಕಳೆದ ಏಳು ದಶಕಗಳಲ್ಲಿ ಆಗದಿದ್ದ ಸಾಧನೆ ಕಳೆದ ಎರಡು ವರ್ಷಗಳಲ್ಲಿ ಆಗಿದೆ ಎಂದೂ ಹೇಳಿದರು. ಗ್ರಾಮ ಪಂಚಾಯಿತಿ, ಪಾಣಿ ಸಮಿತಿ, ಗ್ರಾಮ ಸಮಿತಿಗಳ ಸದಸ್ಯರ ಜೊತೆಗೆ ಸಂವಾದ ನಡಸಿದ ಅವರು, ‘ಮಿಷನ್ ಕೇವಲ ನೀರು ಪೂರೈಕೆ ಉದ್ದೇಶವನ್ನಷ್ಟೇ ಹೊಂದಿಲ್ಲ. ಮಹಿಳಾ ಮುನ್ನಡೆ ಮತ್ತು ವಿಕೇಂದ್ರೀಕರಣದ ಅಭಿಯಾನವೂ ಆಗಿದೆ’ ಎಂದರು.