<p><strong>ಝಾನ್ಸಿ</strong>: ರಾಖಿ ಕಟ್ಟಿದ ಮರುದಿನವೇ ತಂಗಿಯನ್ನು ಕತ್ತು ಹಿಸುಕಿ ಕೊಂದು ಬಳಿಕ ಆಕೆಯ ತಲೆ ಬೋಳಿಸಿ ಮೃತದೇಹವನ್ನು ಬಿಸಾಕಿದ್ದ ಅಣ್ಣನನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ನಡೆದಿದೆ.</p><p>ಝಾನ್ಸಿ ಜಿಲ್ಲೆಯ ಚಂದ್ರಾಪುರದ ಕುಮಾರಿ ಊರ್ಪ್ ಪುಟ್ಟಿ ಕೊಲೆಯಾದ 18 ವರ್ಷದ ಯುವತಿ. ಕೊಲೆ ಆರೋಪದ ಮೇಲೆ ಪುಟ್ಟಿಯ ಅಣ್ಣ ಅರವಿಂದ್ (25) ಹಾಗೂ ಪ್ರಕಾಶ್ (25) ಎಂಬುವರನ್ನು ಬಂಧಿಸಲಾಗಿದೆ.</p><p>ಇತ್ತೀಚೆಗೆ ರಾಖಿ ಹಬ್ಬದ ದಿನ ಅಣ್ಣ ಅರವಿಂದ್ಗೆ ಪುಟ್ಟಿ ರಾಖಿ ಕಟ್ಟಿ ಸಂಭ್ರಮಿಸಿದ್ದರು. ಆದರೆ, ಅರವಿಂದ್ ಮನಸ್ಸಿನಲ್ಲಿ ವಿಷವಿಟ್ಟುಕೊಂಡು ತಂಗಿಗೆ ಅಂತ್ಯ ಕಾಣಿಸಿದ್ದಾನೆ. ಮೃತದೇಹವನ್ನು ಚಂದ್ರಾಪುರದ ರೈಲು ನಿಲ್ದಾಣದ ಬಳಿ ಎಸೆದಿದ್ದ.</p><p>ಪುಟ್ಟಿ, ವಿನೋದ್ (21) ಎಂಬ ಯುವಕನನ್ನು ಪ್ರೀತಿಸಿ ಮನೆ ಬಿಟ್ಟು ಓಡಿ ಹೋಗಿದ್ದರು. ಕೆಲವು ದಿನಗಳ ಹಿಂದೆ ಮನೆಯವರು ಪುಟ್ಟಿಯನ್ನು ವಿನೋದ್ನಿಂದ ಬೇರ್ಪಡಿಸಿ ಮನೆಗೆ ಕರೆದುಕೊಂಡು ಬಂದಿದ್ದರು.</p><p>ಈ ವಿಷಯ ತಿಳಿದ ಅರವಿಂದ್, ಪುಣೆಯಿಂದ ಊರಿಗೆ ಬಂದು ವಿನೋದ್ನನ್ನು ಕೆಲಸ ಕೊಡಿಸುತ್ತೇವೆ ಎಂದು ನಂಬಿಸಿ ಕೊಲೆ ಮಾಡಿದ್ದ. ಇದಕ್ಕೆ ಸ್ನೇಹಿತ ಪ್ರಕಾಶ್ನನ್ನು ಜೊತೆಯಾಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.</p><p>ಇದಾದ ಎರಡು ದಿನದ ಬಳಿಕ ಆಗಸ್ಟ್ 9 ರಂದು ರಾಖಿ ಹಬ್ಬದ ದಿನ ಪುಟ್ಟಿಯಿಂದ ರಾಖಿ ಕಟ್ಟಿಸಿಕೊಂಡು ಅರವಿಂದ್ ಕೃತ್ಯ ಎಸಗಿದ್ದಾನೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಝಾನ್ಸಿ</strong>: ರಾಖಿ ಕಟ್ಟಿದ ಮರುದಿನವೇ ತಂಗಿಯನ್ನು ಕತ್ತು ಹಿಸುಕಿ ಕೊಂದು ಬಳಿಕ ಆಕೆಯ ತಲೆ ಬೋಳಿಸಿ ಮೃತದೇಹವನ್ನು ಬಿಸಾಕಿದ್ದ ಅಣ್ಣನನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ನಡೆದಿದೆ.</p><p>ಝಾನ್ಸಿ ಜಿಲ್ಲೆಯ ಚಂದ್ರಾಪುರದ ಕುಮಾರಿ ಊರ್ಪ್ ಪುಟ್ಟಿ ಕೊಲೆಯಾದ 18 ವರ್ಷದ ಯುವತಿ. ಕೊಲೆ ಆರೋಪದ ಮೇಲೆ ಪುಟ್ಟಿಯ ಅಣ್ಣ ಅರವಿಂದ್ (25) ಹಾಗೂ ಪ್ರಕಾಶ್ (25) ಎಂಬುವರನ್ನು ಬಂಧಿಸಲಾಗಿದೆ.</p><p>ಇತ್ತೀಚೆಗೆ ರಾಖಿ ಹಬ್ಬದ ದಿನ ಅಣ್ಣ ಅರವಿಂದ್ಗೆ ಪುಟ್ಟಿ ರಾಖಿ ಕಟ್ಟಿ ಸಂಭ್ರಮಿಸಿದ್ದರು. ಆದರೆ, ಅರವಿಂದ್ ಮನಸ್ಸಿನಲ್ಲಿ ವಿಷವಿಟ್ಟುಕೊಂಡು ತಂಗಿಗೆ ಅಂತ್ಯ ಕಾಣಿಸಿದ್ದಾನೆ. ಮೃತದೇಹವನ್ನು ಚಂದ್ರಾಪುರದ ರೈಲು ನಿಲ್ದಾಣದ ಬಳಿ ಎಸೆದಿದ್ದ.</p><p>ಪುಟ್ಟಿ, ವಿನೋದ್ (21) ಎಂಬ ಯುವಕನನ್ನು ಪ್ರೀತಿಸಿ ಮನೆ ಬಿಟ್ಟು ಓಡಿ ಹೋಗಿದ್ದರು. ಕೆಲವು ದಿನಗಳ ಹಿಂದೆ ಮನೆಯವರು ಪುಟ್ಟಿಯನ್ನು ವಿನೋದ್ನಿಂದ ಬೇರ್ಪಡಿಸಿ ಮನೆಗೆ ಕರೆದುಕೊಂಡು ಬಂದಿದ್ದರು.</p><p>ಈ ವಿಷಯ ತಿಳಿದ ಅರವಿಂದ್, ಪುಣೆಯಿಂದ ಊರಿಗೆ ಬಂದು ವಿನೋದ್ನನ್ನು ಕೆಲಸ ಕೊಡಿಸುತ್ತೇವೆ ಎಂದು ನಂಬಿಸಿ ಕೊಲೆ ಮಾಡಿದ್ದ. ಇದಕ್ಕೆ ಸ್ನೇಹಿತ ಪ್ರಕಾಶ್ನನ್ನು ಜೊತೆಯಾಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.</p><p>ಇದಾದ ಎರಡು ದಿನದ ಬಳಿಕ ಆಗಸ್ಟ್ 9 ರಂದು ರಾಖಿ ಹಬ್ಬದ ದಿನ ಪುಟ್ಟಿಯಿಂದ ರಾಖಿ ಕಟ್ಟಿಸಿಕೊಂಡು ಅರವಿಂದ್ ಕೃತ್ಯ ಎಸಗಿದ್ದಾನೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>