<p>‘ಲೇಯ್, ಏನೇ ಇದು ಉಪ್ಪಿಟ್ಟು ಇಷ್ಟು ಉಪ್ಪುಪ್ಪಾಗಿದೆ? ನೆಟ್ಟಗೆ ಮಾಡಾಕೆ ಬರಲ್ವಾ?’ ಹೆಂಡತಿ ಪಮ್ಮಿ ಮೇಲೆ ತೆಪರೇಸಿ ರೇಗಿದ.</p>.<p>‘ಅದು ಹಂಗೇ... ನೀವು ಮನೆ ಯಜಮಾನಿಕಿ ಬಿಟ್ಟು ಕೊಡ್ತೀನಿ ಅಂತ ಹೇಳಿ ಎಷ್ಟು ದಿನಾತು, ಬಿಟ್ ಕೊಟ್ಟಿದ್ದೀರಾ? ದೀಪಾವಳಿ ಆತು, ಹೊಸ ವರ್ಷಾತು, ಸಂಕ್ರಾಂತಿನೂ ಆತು... ನನ್ ತಾಳ್ಮೆಗೂ ಒಂದು ಮಿತಿ ಇದೆ...’ ಪಮ್ಮಿ ಗುರ್ ಎಂದಳು.</p>.<p>‘ನಿಂಗೆ ಯಜಮಾನಿಕಿ ಬಿಟ್ ಕೊಡಾಣ ಅಂದ್ರೆ ಬರೀ ಗುಡಿ ಗುಂಡಾರ ಸುತ್ತುತೀಯ. ಪ್ರಾರ್ಥನೆ, ಫಲ ಅಂತ ಪ್ರವಚನ ಹೇಳ್ತೀಯ. ಅದೆಲ್ಲೋ ರೇಷ್ಮೆ ಸೀರೆ ಕಮ್ಮಿ ರೇಟಿಗೆ ಕೊಡ್ತಾರೆ ಅಂತ ದಿನಗಟ್ಲೆ ಕ್ಯೂ ನಿಲ್ತೀಯ... ಯಜಮಾನಿಕಿ ಹೆಂಗ್ ನಡೆಸ್ತೀಯ?’</p>.<p>‘ನೀವು ರಾಜಕೀಯದಲ್ಲಿ ಇರ್ಬೇಕಿತ್ತು ಕಣ್ರಿ, ಯಜಮಾನಿಕಿ ವಿಷ್ಯ ಎತ್ತಿದಾಗೆಲ್ಲ ದೊಡ್ಡ ಖರ್ಗೆ ಸಾಹೇಬ್ರ ತರ ಮಾತೇ ಆಡಲ್ಲ, ಮನೆ ಖರ್ಚಿಗೆ ದುಡ್ಡು ಕೊಡಿ ಅಂದ್ರೆ ಜಮೀರಣ್ಣನ ತರ ಮಾತೇ ನಿಲ್ಸಲ್ಲ... ಈಗ ಈ ಕತೆ ಹೇಳ್ತೀರಾ?’</p>.<p>‘ನೀನೂ ಟ್ರಂಪ್ ತರ ದಾದಾಗಿರಿ ಮಾಡೋದು ಬಿಡು. ನಾನೇನು ಮನೆ ಯಜಮಾನಿಕಿನ ಬೀದೀಲಿ ಹೋಗೋ ದಾಸಮ್ಮನಿಗೆ ಕೊಡಲ್ಲ. ಒಂಬತ್ತು ಸಲ ಎಮ್ಮೆಲ್ಲೆ ಆದ ಖರ್ಗೆ ಸಾಹೇಬ್ರೇ ಸಿಎಂ ಆಗದೆ ಸುಮ್ನದಾರೆ, ನೀನು ಹಾರಾಡ್ತೀಯ... ಒಂದು ವೇಳೆ ನೀನು ಮನಿ ಯಜಮಾನಿ ಆದ್ರೂ...’</p>.<p>‘ಹುಂ, ಆದ್ರೂ...’</p>.<p>‘ನಾನು ನಿನ್ನ ಯಜಮಾನ ಅನ್ನೋದನ್ನ ತಪ್ಸೋಕಾಗುತ್ತಾ? ಸುಮ್ನೆ ನಾನು ಹೇಳಿದಂಗೆ ಕೇಳು...’ ತೆಪರೇಸಿ ನಕ್ಕ.</p>.<p>‘ನೀವಿನ್ನೂ ಯಾವ ಕಾಲದಾಗದೀರಿ? ಅಂಥಾ ಗೌರ್ನರ್ ಸಾಹೇಬ್ರೇ ಈಗ ಸರ್ಕಾರದ ಮಾತು ಕೇಳಲ್ಲ, ಇನ್ನು ನಾನು ಕೇಳ್ತೀನಾ? ನೋ ಚಾನ್ಸ್...’</p>.<p>ಪಮ್ಮಿ ತಿರುಗೇಟಿಗೆ ತೆಪರೇಸಿ ತೆಪ್ಪಗಾದ. ಗೆಳೆಯ ಡುಂಡಿರಾಜ್ ಚುಟುಕು ನೆನಪಾಯಿತು:</p>.<p>‘ನೀರಿನ ಸಾಗರ ದಾಟಲು ತೆಪ್ಪ ಬೇಕು... ಸಂಸಾರದ ಸಾಗರ ದಾಟಲು ತೆಪ್ಪಗಿರಬೇಕು!’</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಲೇಯ್, ಏನೇ ಇದು ಉಪ್ಪಿಟ್ಟು ಇಷ್ಟು ಉಪ್ಪುಪ್ಪಾಗಿದೆ? ನೆಟ್ಟಗೆ ಮಾಡಾಕೆ ಬರಲ್ವಾ?’ ಹೆಂಡತಿ ಪಮ್ಮಿ ಮೇಲೆ ತೆಪರೇಸಿ ರೇಗಿದ.</p>.<p>‘ಅದು ಹಂಗೇ... ನೀವು ಮನೆ ಯಜಮಾನಿಕಿ ಬಿಟ್ಟು ಕೊಡ್ತೀನಿ ಅಂತ ಹೇಳಿ ಎಷ್ಟು ದಿನಾತು, ಬಿಟ್ ಕೊಟ್ಟಿದ್ದೀರಾ? ದೀಪಾವಳಿ ಆತು, ಹೊಸ ವರ್ಷಾತು, ಸಂಕ್ರಾಂತಿನೂ ಆತು... ನನ್ ತಾಳ್ಮೆಗೂ ಒಂದು ಮಿತಿ ಇದೆ...’ ಪಮ್ಮಿ ಗುರ್ ಎಂದಳು.</p>.<p>‘ನಿಂಗೆ ಯಜಮಾನಿಕಿ ಬಿಟ್ ಕೊಡಾಣ ಅಂದ್ರೆ ಬರೀ ಗುಡಿ ಗುಂಡಾರ ಸುತ್ತುತೀಯ. ಪ್ರಾರ್ಥನೆ, ಫಲ ಅಂತ ಪ್ರವಚನ ಹೇಳ್ತೀಯ. ಅದೆಲ್ಲೋ ರೇಷ್ಮೆ ಸೀರೆ ಕಮ್ಮಿ ರೇಟಿಗೆ ಕೊಡ್ತಾರೆ ಅಂತ ದಿನಗಟ್ಲೆ ಕ್ಯೂ ನಿಲ್ತೀಯ... ಯಜಮಾನಿಕಿ ಹೆಂಗ್ ನಡೆಸ್ತೀಯ?’</p>.<p>‘ನೀವು ರಾಜಕೀಯದಲ್ಲಿ ಇರ್ಬೇಕಿತ್ತು ಕಣ್ರಿ, ಯಜಮಾನಿಕಿ ವಿಷ್ಯ ಎತ್ತಿದಾಗೆಲ್ಲ ದೊಡ್ಡ ಖರ್ಗೆ ಸಾಹೇಬ್ರ ತರ ಮಾತೇ ಆಡಲ್ಲ, ಮನೆ ಖರ್ಚಿಗೆ ದುಡ್ಡು ಕೊಡಿ ಅಂದ್ರೆ ಜಮೀರಣ್ಣನ ತರ ಮಾತೇ ನಿಲ್ಸಲ್ಲ... ಈಗ ಈ ಕತೆ ಹೇಳ್ತೀರಾ?’</p>.<p>‘ನೀನೂ ಟ್ರಂಪ್ ತರ ದಾದಾಗಿರಿ ಮಾಡೋದು ಬಿಡು. ನಾನೇನು ಮನೆ ಯಜಮಾನಿಕಿನ ಬೀದೀಲಿ ಹೋಗೋ ದಾಸಮ್ಮನಿಗೆ ಕೊಡಲ್ಲ. ಒಂಬತ್ತು ಸಲ ಎಮ್ಮೆಲ್ಲೆ ಆದ ಖರ್ಗೆ ಸಾಹೇಬ್ರೇ ಸಿಎಂ ಆಗದೆ ಸುಮ್ನದಾರೆ, ನೀನು ಹಾರಾಡ್ತೀಯ... ಒಂದು ವೇಳೆ ನೀನು ಮನಿ ಯಜಮಾನಿ ಆದ್ರೂ...’</p>.<p>‘ಹುಂ, ಆದ್ರೂ...’</p>.<p>‘ನಾನು ನಿನ್ನ ಯಜಮಾನ ಅನ್ನೋದನ್ನ ತಪ್ಸೋಕಾಗುತ್ತಾ? ಸುಮ್ನೆ ನಾನು ಹೇಳಿದಂಗೆ ಕೇಳು...’ ತೆಪರೇಸಿ ನಕ್ಕ.</p>.<p>‘ನೀವಿನ್ನೂ ಯಾವ ಕಾಲದಾಗದೀರಿ? ಅಂಥಾ ಗೌರ್ನರ್ ಸಾಹೇಬ್ರೇ ಈಗ ಸರ್ಕಾರದ ಮಾತು ಕೇಳಲ್ಲ, ಇನ್ನು ನಾನು ಕೇಳ್ತೀನಾ? ನೋ ಚಾನ್ಸ್...’</p>.<p>ಪಮ್ಮಿ ತಿರುಗೇಟಿಗೆ ತೆಪರೇಸಿ ತೆಪ್ಪಗಾದ. ಗೆಳೆಯ ಡುಂಡಿರಾಜ್ ಚುಟುಕು ನೆನಪಾಯಿತು:</p>.<p>‘ನೀರಿನ ಸಾಗರ ದಾಟಲು ತೆಪ್ಪ ಬೇಕು... ಸಂಸಾರದ ಸಾಗರ ದಾಟಲು ತೆಪ್ಪಗಿರಬೇಕು!’</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>