ಅನುಪ್ಪುರ್ (ಮಧ್ಯಪ್ರದೇಶ): ವಕೀಲ ಗಂಡನನ್ನು ಕೊಂದು ಮನೆಯಲ್ಲೇ ಹೂತುಹಾಕಿದ ಘಟನೆ ತಿಂಗಳಾದ ನಂತರ ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲದೆ ತಾನು ಮಾಡಿದ ಅಪರಾಧ ಕೃತ್ಯಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಸಿಗದಂತೆ ಮಾಡಲು ಗಂಡನನ್ನು ಹೂತ ಜಾಗದಲ್ಲೇ ಮಹಿಳೆ ಅಡುಗೆ ಮನೆ ಮಾಡಿಕೊಂಡಿದ್ದಳು ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.