`ನಾನು ಅಣ್ಣಾ~ ಎಂಬ ಬರಹವುಳ್ಳ ಗಾಂಧಿ ಟೋಪಿ ಮತ್ತು ಗುಲಾಬಿ ಹೂವಿನ ಗುಚ್ಛವನ್ನು ನೀಡಿ ಭ್ರಷ್ಟಾಚಾರ ನಿರ್ಮೂಲನೆಗೆ ಸಹಕಾರ ನೀಡಿ ಎಂದು ಕಾರ್ಯಕರ್ತರು ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂದು `ಇಂಡಿಯಾ ಅಗೆನೆಸ್ಟ್ ಕರಪ್ಷನ್~ ತಂಡದ ಸ್ಥಳೀಯ ಘಟಕದ ಸಂಚಾಲಕ ವಿಜಯ್ ಝಾ ಅವರು ತಿಳಿಸಿದ್ದಾರೆ.
`ನಮ್ಮ ತಂಡದ ಸದಸ್ಯರು ಪ್ರತಿ ದಿನ ವಾಣಿಜ್ಯ ತೆರಿಗೆ ಇಲಾಖೆ, ಸಾರಿಗೆ ಇಲಾಖೆ, ನೋಂದಣಿ ಇಲಾಖೆ ಮತ್ತು ಇತರ ಪ್ರಮುಖ ಸರ್ಕಾರಿ ಕಚೇರಿಗಳ ಅಧಿಕಾರಿಗಳಿಗೆ ಟೋಪಿ ಮತ್ತು ಹೂವುಗಳನ್ನು ನೀಡುತ್ತಿದ್ದಾರೆ~ ಎಂದು ಝಾ ತಿಳಿಸಿದ್ದಾರೆ.