ಚೆನ್ನೈ : ‘ದೇಶದ ಮೇಲೆ ‘ಹಿಂದು, ಹಿಂದಿ, ಹಿಂದೂಸ್ತಾನ’ ಎಂಬ ಏಕರೂಪ ವ್ಯವಸ್ಥೆಯನ್ನು ಹೇರಲು ಆರ್ಎಸ್ಎಸ್ ಪ್ರಯತ್ನಿಸುತ್ತಿದೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದರು.
ವಿದುತಲೈ ಚಿರುದಗಳ್ ಕಚ್ಚಿ (ವಿಸಿಕೆ) ಇಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯ ಸ್ವಾಯತ್ತ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ‘ಆರ್ಎಸ್ಎಸ್ ಮತ್ತು ಬಿಜೆಪಿ ದೇಶದ ಒಕ್ಕೂಟ ವ್ಯವಸ್ಥೆಯನ್ನು ನಾಶಪಡಿಸಲು ಪ್ರಯತ್ನಿಸುತ್ತಿವೆ’ ಎಂದು ದೂರಿದರು.
‘ಬಹುಸಂಸ್ಕೃತಿಯನ್ನು ಒಪ್ಪಿಕೊಳ್ಳದ ಆರ್ಎಸ್ಎಸ್, ಒಂದು ಭಾಷೆ, ಒಂದು ಸಂಸ್ಕೃತಿಯನ್ನು ಹೇರಲು ಬಯಸುತ್ತಿದೆ. ಇದಕ್ಕಾಗಿ ಆರ್ಎಸ್ಎಸ್ ಮತ್ತು ಬಿಜೆಪಿ ಸತತವಾಗಿ ಪ್ರಯತ್ನ ನಡೆಸುತ್ತಾ ಬರುತ್ತಿವೆ’ ಎಂದು ವಿಜಯನ್ ದೂರಿದರು.