ನವದೆಹಲಿ (ಪಿಟಿಐ): ಮತ್ತೊಂದು ತರಂಗಾಂತರ ಹಗರಣ ಭೂತ ಸರ್ಕಾರದ ಹೆಗಲೇರುವ ಲಕ್ಷಣಗಳು ಕಾಣುತ್ತಿರುವಾಗಲೇ ಇಸ್ರೊದ ಅಂತರಿಕ್ಷ್ ಹಾಗೂ ಬೆಂಗಳೂರು ಮೂಲದ ದೇವಾಸ್ ಮಲ್ಟಿಮೀಡಿಯಾ ನಡುವೆ ಏರ್ಪಟ್ಟಿದ್ದ ಎಸ್-ಬ್ಯಾಂಡ್ ನೀಡಿಕೆ ಒಪ್ಪಂದವನ್ನು ಕೇಂದ್ರ ಸರ್ಕಾರ ಮುಂದಿನ ವಾರ ರದ್ದುಗೊಳಿಸುವ ಸಾಧ್ಯತೆ ಇದೆ. ಬರುವ ವಾರ ನಡೆಯಲಿರುವ ಕೇಂದ್ರ ಸಂಪುಟ ಸಭೆಯಲ್ಲಿ ಒಪ್ಪಂದ ನಿರ್ಧಾರ ಕೈಗೊಳ್ಳಬಹುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.