ಕಣ್ಣೂರು: ಹತ್ಯೆಗಾಗಿ ಜಾನುವಾರು ಮಾರಾಟ ನಿರ್ಬಂಧಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶದ ವಿರುದ್ಧ ಕೇರಳದ ಕಣ್ಣೂರಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಡೆಸಿರುವ ಪ್ರತಿಭಟನೆ ಟೀಕೆಗೆ ಗುರಿಯಾಗಿದೆ. ಪ್ರತಿಭಟನಾಕಾರರು ಜಾನುವಾರೊಂದನ್ನು ಸಾರ್ವಜನಿಕವಾಗಿ ಶಿರಚ್ಛೇದ ಮಾಡಿ ಹತ್ಯೆ ಮಾಡಿದ್ದಾರೆ ಎಂಬುದಾಗಿ ದಿ ನ್ಯೂಸ್ ಮಿನಿಟ್ ವೆಬ್ಸೈಟ್ ವರದಿ ಮಾಡಿದೆ.
ಘಟನೆಗೆ ಸಂಬಂಧಿಸಿದ ವಿಡಿಯೊವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕುಮ್ಮನಮ್ ರಾಜಶೇಖರನ್ ಟ್ವೀಟ್ ಮಾಡಿದ್ದಾರೆ. ಮೂವರು ಸಣ್ಣ ಮಕ್ಕಳು ಜಾನುವಾರು ಹತ್ಯೆಯನ್ನು ನೋಡುತ್ತಿರುವ ದೃಶ್ಯವನ್ನೂ ವಿಡಿಯೊ ಒಳಗೊಂಡಿದೆ. ಆದರೆ, ಹತ್ಯೆ ವೇಳೆ ಮಕ್ಕಳು ಇರಲಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
‘ಕ್ರೂರತೆಯ ಪರಾಕಾಷ್ಠೆ. ಕೇರಳದ ಯುವ ಕಾಂಗ್ರೆಸ್ ಕಾರ್ಯಕರ್ತರು ಸಾರ್ವಜನಿಕವಾಗಿ ಜಾನುವಾರು ಹತ್ಯೆ ಮಾಡಿದ್ದಾರೆ’ ಎಂದು ರಾಜಶೇಖರನ್ ಟ್ವೀಟ್ ಮಾಡಿದ್ದಾರೆ.
Cruelty at its peak.Cattle slaughtering by Kerala Youth Congress leader in broad daylight,in front of public gathering. pic.twitter.com/4gBWUVDa1l