ನವದೆಹಲಿ (ಐಎಎನ್ಎಸ್): ಕಾರ್ಪೊರೇಟ್ ದಲ್ಲಾಳಿ ನೀರಾ ರಾಡಿಯಾ ಟೇಪ್ ಹಗರಣಕ್ಕೆ ಸಂಬಂಧಿಸಿದ ಗೋಪ್ಯ ವರದಿಯನ್ನು ತಮಗೆ ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ಉದ್ಯಮಿ ರತನ್ ಟಾಟಾ ಗುರುವಾರ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಆದಾಯ ತೆರಿಗೆ ಮಹಾ ನಿರ್ದೇಶಕರು ನಡೆಸಿರುವ ತನಿಖೆಯ ಈ ವರದಿಯನ್ನು ಅಧ್ಯಯನ ಮಾಡಿದರೆ, ದೂರಸಂಪರ್ಕ ಸೇವಾ ಕಂಪೆನಿಗಳನ್ನು ಪ್ರತಿವಾದಿಗಳನ್ನಾಗಿಸಿ ಖಟ್ಲೆ ಹೂಡಲು ಅನುಕೂಲವಾಗುತ್ತದೆ ಎಂದು ಟಾಟಾ ವಾದಿಸಿದ್ದಾರೆ.
ನ್ಯಾಯಮೂರ್ತಿ ಜಿ.ಎಸ್ ಸಿಂಘ್ವಿ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಟಾಟಾ ಪರ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿದರು.