ಇದೇ ವೇಳೆ, ಈ ಅರ್ಜಿಯ ವಿಚಾರಣೆ ಯಾರ ವ್ಯಾಪ್ತಿಗೆ ಬರುತ್ತದೆ ಎಂಬ ಬಗ್ಗೆಯೂ ನ್ಯಾಯಾಲಯ ಪ್ರಶ್ನೆಯನ್ನು ಎತ್ತಿದೆ. ಈ ಪ್ರಕರಣವನ್ನು ಮೊದಲು ಮ್ಯಾಜಿಸ್ಟ್ರೇಟ್ ಅವರ ಮುಂದಕ್ಕೆ ಕೊಂಡೊಯ್ಯಬೇಕಿತ್ತು ಎಂದು ತಹಲಿಯಾನಿ ಅಭಿಪ್ರಾಯಪಟ್ಟರು.ಪಬ್ಲಿಕ್ ಪ್ರಾಸಿಕ್ಯೂಟರ್ ಎನ್.ಪುಂಡೆ ಮಾತನಾಡಿ, ‘ಅಕ್ರಮ ಲೇವಾದೇವಿ ನಿರ್ಮೂಲನೆ ಕಾಯ್ದೆಯಡಿ, ಈ ಪ್ರಕರಣದ ವಿಚಾರಣೆ ನಡೆಸುವ ಅಧಿಕಾರ ವಿಶೇಷ ನ್ಯಾಯಾಲಯಕ್ಕೆ ಇದೆ’ ಎಂದು ವಾದಿಸಿದರು.