ರಾಂಚಿ: ಪಡಿತರ ಸಿಗದೆ ಹಸಿವಿನಿಂದ ಮಗುವನ್ನು ಕಳೆದುಕೊಂಡಿರುವ ತಾಯಿಗೆ ಗ್ರಾಮಸ್ಥರು ನಿಂದಿಸಿ, ಗ್ರಾಮ ತೊರೆಯುವಂತೆ ಬೆದರಿಕೆ ಹಾಕಿದ್ದಾರೆ.
ಆಧಾರ್ ಕಾರ್ಡ್ ಲಿಂಕ್ ಮಾಡದ ಬಡ ಕುಟುಂಬವೊಂದಕ್ಕೆ ಕಳೆದ ಕೆಲವು ತಿಂಗಳುಗಳಿಂದ ಪಡಿತರ ನೀಡದ ಪರಿಣಾಮ 11 ವರ್ಷದ ಬಾಲಕಿ ಸಂತೋಷಿ ಕುಮಾರಿ ಎಂಬಾಕೆ ಹಸಿವಿನಿಂದ ಮೃತಪಟ್ಟ ದಾರುಣ ಘಟನೆ ನಡೆದ ಜಾರ್ಖಂಡ್ನ ಸಿಮ್ಡೇಗಾ ಜಿಲ್ಲೆಯ ಗ್ರಾಮದಲ್ಲಿ ಸಂತೋಷಿ ಕುಮಾರಿ ತಾಯಿಗೆ ನಿಂದಿಸಿ, ಗ್ರಾಮ ತೊರೆಯುವಂತೆ ಬೆದರಿಕೆ ಹಾಕಿದ್ದು, ಆ ಮಹಿಳೆಗೆ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.
‘ನಾನು ಭಯದಿಂದ ಜೀವಿಸುತ್ತಿದ್ದೇನೆ. ಗ್ರಾಮಸ್ಥರು ನನ್ನನ್ನು ನಿಂದಿಸಿ, ಗ್ರಾಮ ಬಿಡಲು ಹೇಳಿದರು’ ಎಂದು ಹಸಿವಿನಿಂದ ಮೃತಪಟ್ಟ ಸಂತೋಷಿ ಕುಮಾರಿಯ ತಾಯಿ ಕೊಯ್ಲಿ ದೇವಿ ಹೇಳಿದ್ದಾರೆ.