ಶ್ರೀನಗರ (ಪಿಟಿಐ): .ಅಂತರರಾಷ್ಟ್ರೀಯ ಕಲಾವಿದ ಜುಬಿನ್ ಮೆಹ್ತಾ ಅವರ ಸಂಗೀತ ಕಛೇರಿಯನ್ನು ಇಲ್ಲಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ರೆಹಮಾನ್ ರಹಿ ಸೇರಿದಂತೆ ಹಲವು ಕವಿಗಳು ವಿರೋಧಿಸಿದ್ದಾರೆ.
ಶನಿವಾರ ಇಲ್ಲಿ ನಡೆಯಲಿರುವ ಮೆಹ್ತಾ ಅವರ ಸಂಗೀತ ಕಛೇರಿಯಲ್ಲಿ ಭಾಗವಹಿಸುವುದಿಲ್ಲ ಎಂದು ರಹಿ ಸೇರಿದಂತೆ ಹಲವು ಕವಿಗಳು ಹೇಳಿದ್ದಾರೆ.
ಕಾಶ್ಮೀರದ ಸಮಸ್ಯೆ ಬಗೆಹರಿಯದೆ ಜನರು ಸಂಕಷ್ಟದಲ್ಲಿರುವಾಗ ನಾವು ಇಂತಹ ಜನಪ್ರಿಯ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ ಎಂದು ಕಾಶ್ಮೀರದ ಕವಿ ಜರೀಫ್ ಅಹಮ್ಮದ್ ತಿಳಿಸಿದ್ದಾರೆ.