ನವದೆಹಲಿ,(ಐಎಎನ್ಎಸ್/ಪಿಟಿಐ): 2 ಜಿ ತರಂಗಾಂತರ ಹಗರಣದಲ್ಲಿ ತಿಹಾರ್ ಜೈಲು ಸೇರಿದ ಮಾಜಿ ದೂರಸಂಪರ್ಕ ಸಚಿವ ಎ. ರಾಜಾ, ಶುಕ್ರವಾರ ಬೆಳಿಗ್ಗೆ ಹಾಜರಾತಿಗಾಗಿ ಎಲ್ಲರಂತೆಯೇ ಸರದಿಯಲ್ಲಿ ನಿಂತರು.
ಒಂದು ಗಂಟೆ ಬಳಿಕ ಸೆರೆಮನೆ ಸಂಖ್ಯೆ 1ರ ಅತಿ ಗಣ್ಯ ವ್ಯಕ್ತಿ ವಾರ್ಡ್ನಲ್ಲಿ ಅವರು ಚಹಾ ಕುಡಿದು ಪತ್ರಿಕೆ ಓದಿದರು. ಮುಂದಿನ 14 ದಿನಗಳ ಕಾಲ ರಾಜಾ ಇಲ್ಲಿಯೇ ಇರಲಿದ್ದು, ಅವರಿಗೆ ಯಾವುದೇ ರೀತಿಯ ಅತಿ ಗಣ್ಯ ವ್ಯಕ್ತಿಯ ಉಪಚಾರವನ್ನು ನೀಡಲಾಗುತ್ತಿಲ್ಲ ಎಂದು ಸೆರೆಮನೆಗಳು ಅಧಿಕಾರಿಗಳು ತಿಳಿಸಿದ್ದಾರೆ.
‘ರಾಜಾ ಅವರು ಬೆಳಿಗ್ಗೆ 6 ಗಂಟೆಗೆ ಎದ್ದು ಇತರರಂತೆ ಹಾಜರಾತಿಗಾಗಿ ಸರದಿಯಲ್ಲಿ ನಿಂತುಕೊಂಡರು. ಅವರಿಗೆ ಸರಿಯಾಗಿ 7 ಗಂಟೆಗೆ ಚಹಾ ನೀಡಲಾಯಿತು. ಬಳಿಕ ಅವರು ಓದಲು ಪತ್ರಿಕೆ ಕೇಳಿದರು’ ಎಂದು ಸೆರೆಮನೆ ವಕ್ತಾರ ಸುನಿಲ್ ಗುಪ್ತಾ ತಿಳಿಸಿದರು.ಸುರಕ್ಷತೆಯ ದೃಷ್ಟಿಯಿಂದ ಅವರನ್ನು ವಿಐಪಿ ವಾರ್ಡ್ನಲ್ಲಿರಿಸಲಾಗಿದೆ ಎಂದು ಅವರು ತಿಳಿಸಿದರು.
ಬಲ್ವಾ ಜೈಲಿಗೆ